ವಿಜಯಪುರ, ಮೇ.3, ನ್ಯೂಸ್ ಎಕ್ಸ್ ಪ್ರೆಸ್: 2019ರ ಲೋಕಸಭಾ ಚುನಾವಣೆವು ನಮ್ಮ ರಾಜ್ಯದಲ್ಲಿ ಮುಗಿದಿದೆ. ಫಲಿತಾಂಶಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ಕಾಯುತ್ತಿವೆ. ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತೆ ಅಂತಾ ಮಾಜಿ ಸಚಿವ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಜಯಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಹಣದ ಹೊಳೆ ಹರಿಸಿದರು ಈ ಬಾರಿ ಬಿಜೆಪಿಯ ಗೆಲುವು ನಿಶ್ಚಿತ ಅಂತಾ ಹೇಳಿದ್ದಾರೆ.
ನನ್ನ ಮಾತು ನಿಜ. ಬೇಕಾದ್ರೆ ನಾನು ಬೆಟ್ಟಿಂಗ್ ಕಟ್ಟೋಕೆ ರೆಡಿ. ಯಾರು ಬೇಕಾದರು 1 ರೂ. ಬೆಟ್ಟಿಂಗ್ ಕಟ್ಟಿ ಅಂತಾ ಸವಾಲ್ ಹಾಕಿದ್ದಾರೆ.