ನವದೆಹಲಿ, ಮಾ.20, ನ್ಯೂಸ್ ಎಕ್ಸ್ ಪ್ರೆಸ್: ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತದ ತಂಡದ 4ನೇ ಕ್ರಮಾಂಕಕ್ಕೆ ಯಾರು ಆಯ್ಕೆಯಾಗುತ್ತಾರೆ ಎನ್ನುವ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.
ಬಿಸಿಸಿಐ ಮೂಲಗಳ ಪ್ರಕಾರ, ಈ ಕ್ರಮಾಂಕಕ್ಕೆ ಮಧ್ಯಮ ವೇಗದ ಬೌಲಿಂಗ್ ಆಲ್ರೌಂಡರ್ ವಿಜಯ್ ಶಂಕರ್ ಆಯ್ಕೆ ಬಹುತೇಕ ಖಚಿತವಾಗುವ ಸಾಧ್ಯತೆ ಇದೆ. ಈ ಸ್ಥಾನಕ್ಕೆ ಅಂಬಟಿ ರಾಯುಡು ಮತ್ತು ವಿಜಯ್ ಶಂಕರ್ ನಡುವೆ ಪೈಪೋಟಿಯಿದ್ದರೂ, ಇತ್ತೀಚಿಗಿನ ಫಾಮರ್್ನಂತೆ ಅಂಬಟಿ ರಾಯುಡುಗೆ ಈ ಸ್ಥಾನ ಒಲಿಯುವ ಸಾಧ್ಯತೆ ಕಡಿಮೆಯಾಗಿದೆ.
ವಿಜಯ್ ಶಂಕರ್ ಬಲಿಷ್ಠ ತಂಡಗಳ ಎದುರು ತಾಂತ್ರಿಕವಾಗಿ ಹಾಗೂ ಒತ್ತಡದ ಸನ್ನಿವೇಶದಲ್ಲಿ ಧೈರ್ಯದಲ್ಲಿ ಆಡಿದರೆ, ರಾಯುಡು ಇದರಲ್ಲಿ ವಿಫಲರಾಗಿದ್ದಾರೆ. ರಾಯುಡು ಆಟ ಶ್ರೀಲಂಕಾ, ಜಿಂಬಾಬ್ವೆ, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್ನಂಥ ದುರ್ಬಲ ಬೌಲಿಂಗ್ ವಿಭಾಗದ ಎದುರು ಮಾತ್ರವೇ ಬಂದಿರುತ್ತದೆ.
2003ರ ಏಕದಿನ ವಿಶ್ವಕಪ್ಗೂ ವಿವಿಎಸ್ ಲಕ್ಷ್ಮಣ್ ಬದಲು ಸ್ಪಿನ್ ಬೌಲಿಂಗ್ ಆಲ್ರೌಂಡರ್ ಆಗಿದ್ದ ದಿನೇಶ್ ಮೊಂಗಿಯಾ ಇದೇ ರೀತಿಯ ಅಚ್ಚರಿಯ ಅವಕಾಶ ನೀಡಿದ್ದರೆ, ಇದೇ ಕ್ರಮಾಂಕದಲ್ಲಿ 2011ರ ವಿಶ್ವಕಪ್ಗೆ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಆಗಿ ಯುವರಾಜ್ ಸಿಂಗ್ ಆಡಿದ್ದರು. ‘ರಾಯುಡು ವೆಲ್ಲಿಂಗ್ಟನ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 90 ರನ್ ಬಾರಿಸಿದ್ದು ಬಿಟ್ಟರೆ, ಮಧ್ಯಮ ವೇಗದ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸುತ್ತಿಲ್ಲ. ಶಂಕರ್ ಬ್ಯಾಟಿಂಗ್ನಲ್ಲಿ 2 ವಿಶೇಷತೆಯಿದೆ. ಸುಲಭವಾಗಿ ಸ್ಟ್ರೈಕ್ ರೊಟೇಟ್ ಮಾಡಬಲ್ಲರು, ಪವರ್ ಹಿಟ್ಟರ್ ಕೂಡ ಹೌದು’ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.