ನಟ ಜಗ್ಗೇಶ್ ಹೇಳಿಕೆಗೆ ಕಾಲೈ ತಸ್ಮೈ ನಮಃ ಎಂದಾ ವರ್ತೂರ್

ನಟ ಜಗ್ಗೇಶ್ ಹೇಳಿಕೆಗೆ ಕಾಲೈ ತಸ್ಮೈ ನಮಃ ಎಂದಾ ವರ್ತೂರ್

ಬೆಂಗಳೂರು: ನಮ್ಮ ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್10  ಅತ್ಯಂತ ಭರ್ಜರಿಯಾಗಿ ಯಶಸ್ಸನ್ನು ಕಂಡಿದ್ದು. ಇದರಲ್ಲಿ ಹಳ್ಳಿಕಾರ್ ವರ್ತೂರ್ ಸಂತೋಷ ಅವರು ಸಹ ಈ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು, ಆದರೆ ಇವರು ಹಾಕಿಕೊಂಡಿರುವಂತಹ ಹುಲಿ ಉಗರಿನ ಪೆಂಡೆಂಟ್ ನಿಜವಾದ ಹುಲಿ ಉಗರಿ ಆಗಿರುವುದರಿಂದ ಪೊಲೀಸರು ಇವರನ್ನು ಬಿಗ್ ಬಾಸ್ ಮನೆಯಿಂದಲೇ ಸಹ ಅರೆಸ್ಟ್ ಮಾಡಿ ಜೈಲಿಗೆ ಹಾಕಿದ್ದರು. ಸಂತೋಷ್ ರವರಿಂದ ಇಡೀ ನಮ್ಮ ಸ್ಯಾಂಡಲ್ವುಡ್ ನಟರಿಗೆ ಹುಲಿ ಉಗುರಿನ ಪೆಂಡೆಂಟ್ ಮೇಲೆ ಅಧಿಕಾರಿಗಳು ನಟರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡುತ್ತಾ ನಟ ಜಗ್ಗೇಶ್ ಹುಲಿ ಉಗುರು ಪ್ರಕರಣದ ಬಗ್ಗೆ ವರ್ತೂರು ಸಂತೋಷ್ ಅವರನ್ನು ನಿದಿಂಸಿದ್ದರು. ಇದೀಗ ವರ್ತೂರು ಸಂತೋಷ್ ಇದರ ಬಗ್ಗೆ ಮಾತನಾಡಿದ್ದಾರೆ  ಇತ್ತೀಚಿಗಷ್ಟೇ ರಂಗ ನಾಯಕ ಸಿನಿಮಾದ ಕಾರ್ಯಕ್ರಮದಲ್ಲಿ ಹುಲಿಗೂರ ಪ್ರಕರಣದ ಬಗ್ಗೆ ಮಾತನಾಡಿದಂತೆ ಜಗ್ಗೇಶ್ ನಾನು ಹುಲಿ ತರ ಬದುಕಬೇಕು ಅಂತ ನಮ್ಮಮ್ಮ ಹುಲಿ ಉಗರಿನ ಪೆಂಡೆಂಟ್ ಕೊಟ್ಟರು ಆದರೆ ಯಾವನೋ ಕಿತ್ತೋದ್ ನನ್ ಮಗ ನಿಜವಾದರೂ ಹುಲಿ ಉಗುರು ಹಾಕೊಂಡು ಟಿವಿಗೆ ಹೋಗಿ ಅಲ್ಲಿ ತಗಳಕೊಂಡ ಎಂದು ಜಗದೀಶ್ ಅವರು ಹೇಳಿದ್ದಾರೆ.

ಜಗ್ಗೇಶ್ ಅವರು ವರ್ತೂರು ಸಂತೋಷ್ ಕಿತ್ತೋದ್ ನನ್ ಮಗ ಎಂಬ ಪದ ಬಳಸಬಾರದಿತ್ತು ಅಂತ ನೆಟ್ಟಿಗರು ಅಭಿಪ್ರಾಯಪಟ್ಟಿದ್ದರು ಜಗ್ಗೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ವರ್ತೂರು ಸಂತೋಷ್ ಬಿಡಿ ಅವರು ದೊಡ್ಡವರು ನಾನು ಹೇಳಲಿಚ್ಚಿಸುವುದು ಕಾಲೈ ತಸ್ಮೈ ನಮಃ ಅಷ್ಟೇ ಎಲ್ಲದಕ್ಕೂ ಉತ್ತರ ಕೊಡಲೇಬೇಕು ಅಂತ ಏನು ಇಲ್ಲ, ಕೆಲವೊಂದು ಉತ್ತರ ಕೊಡಬೇಕು ಕೆಲವೊಂದುಕ್ಕೆ ಮೌನವಾಗಿದ್ದರೆ ಸಾಕು ಉತ್ತರ ಸಿಗಲಿದೆ ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos