ವರದಕ್ಷಿಣೆ ಕಿರುಕುಳ 3 ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ವರದಕ್ಷಿಣೆ ಕಿರುಕುಳ 3 ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ರಾಯಚೂರು, ಆ. 21 : ವರದಕ್ಷಿಣೆ ಕಿರುಕುಳದಿಂದ ನೊಂದಿದ್ದ ತಾಯಿಯೊಬ್ಬರು3 ಮಕ್ಕಳೊಂದಿಗೆ ಕಾಲುವೆಗೆ ಹಾರಿ ಸಾವಿಗೆ ಶರಣಾದ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ. ನಸೀಮಾ ಮಹಿಬೂಬ್ (28), ಮಹ್ಮದ್ ಹನೀಫ್( 5) ಐಯಾನ್ (3) ರೀಗಾನ್ (1) ಮೃತಪಟ್ಟ ದುರ್ದೈವಿಗಳು.

ಸಿರವಾರ ತಾಲೂಕಿನ ಅತ್ತನೂರು ಗ್ರಾಮದ ನಸೀಮಾಗೆ ಕಳೆದ 5 ವರ್ಷದ ಹಿಂದೆ ದೇವದುರ್ಗ ತಾಲೂಕಿನ ದೇವತಗಲ್ ಗ್ರಾಮದ ಮಹಿಬೂಬ್ ಎಂಬಾತನ ಜತೆ ಮದುವೆಯಾಗಿತ್ತು. ಮದುವೆಯಾದಾಗಿನಿಂದ ಗಂಡ, ಅತ್ತೆ, ಮೈದುನ, ಮೈದುನನ ಪತ್ನಿ ಹಾಗೂ ನಾದಿನಿ ಪ್ರತಿನಿತ್ಯ ನಿತ್ಯ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎನ್ನಲಾಗುತ್ತಿದೆ. ಗಂಡ ಮಹಿಬೂಬ್, ಅತ್ತೆ ಹಮೀದಾ, ಮೈದುನ ಮುಸ್ತಫಾ ಹಾಗೂ ಮೈದುನನ ಹೆಂಡತಿ ಮುಮ್ತಾಜ್ ವಿರುದ್ಧ ನಸೀಮಾ ತದೆ ಕಿರುಕುಳದ ಆರೋಪ ಮಾಡಿದ್ದಾರೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos