ಉಲ್ಟಾ ಹೊಡೆದ ವಿ ಸೋಮಣ್ಣ!

ಉಲ್ಟಾ ಹೊಡೆದ ವಿ ಸೋಮಣ್ಣ!

ತುಮಕೂರು: ಸ್ವಪಕ್ಷ ವಿರುದ್ಧವೇ ಅಸಮಾಧಾನಗೊಂಡಿರುವ ವಿ ಸೋಮಣ್ಣ ಅವರು, ಮತ್ತೊಮ್ಮೆ ಪಕ್ಷದ ನಾಯಕರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್‌ 6ರ ಬಳಿಕ ನನ್ನ ಮನಸ್ಸಿ‌ನ ಭಾವನೆ ಹೇಳುತ್ತೇನೆ ಎಂದು ಅಚ್ಚರಿ ಹೇಳಿಕೆ  ನೀಡಿದ್ದರು. ಕೆಲ ದಿನಗಳ ಹಿಂದೆ ಕುಟುಂಬ ಸಮೇತರಾಗಿ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದ ಬಿಜೆಪಿ ನಾಯಕ ವಿ ಸೋಮಣ್ಣ  ಅವರಿಗೆ ಮಾಧ್ಯಮ ಪ್ರತಿನಿಧಿಗಳು ಕಾಂಗ್ರೆಸ್ ಸೇರ್ತಿರಾ ಸಾರ್ ಅಂತ ಕೇಳಿದಾಗ, ಕಾಯಿರಿ ಎಲ್ಲ ಹೇಳ್ತೀನಿ ಅಂದಿದ್ದರು.

ಸೋಮಣ್ಣ ಮತ್ತೊಮ್ಮೆ ಸಿದ್ದಗಂಗಾ ಮಠಕ್ಕೆ ಬಂದಿದ್ದಾರೆ. ಪತ್ರಕರ್ತರು ಕಳೆದ ಬಾರಿ ಕೇಳಿದ ಪ್ರಶ್ನೆಯನ್ನೇ ಪುನರಾವರ್ತಿಸಿದ ಕೂಡಲೇ ಉಲ್ಟಾ ಹೊಡೆದ ಸೋಮಣ್ಣ,  ಆರನೇ ತಾರೀಖು ನಂತರ ಅಂತ ಹೇಳಿದ್ದೆ. ಪತ್ರಕರ್ತರಿಗೆ ಅವರು ತಾನು ಕಾಂಗ್ರೆಸ್ ಸೇರಬೇಕೆಂದಿದ್ದ ವಿಚಾರವನ್ನು ಮನಸ್ಸಿನಿಂದ ತೆಗೆದುಬಿಡಿ, ಲಿಂಗೈಕ್ಯ ಡಾ ಶಿವಕುಮಾರ ಸ್ವಾಮಿಯವರ ಪುಣ್ಯಕ್ಷೇತ್ರದಲ್ಲಿದ್ದೀರಿ, ನಿಮಗೆ ಮತ್ತು ನಿಮ್ಮ ಕುಟುಂಬದವರಿಗಾಗಿ ಒಳ್ಳೆಯದನ್ನು ಬೇಡಿಕೊಳ್ಳಿ ಅಂತ ಆಧ್ಯಾತ್ಮದ ಮಾತುಗಳನ್ನಾಡುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos