ಉಪಚುನಾವಣೆ ‘ ಕೈ’ ಪಾಲಿಗೆ ಪ್ರತಿಷ್ಠೆಯ ಕಣ..!

ಉಪಚುನಾವಣೆ ‘ ಕೈ’ ಪಾಲಿಗೆ ಪ್ರತಿಷ್ಠೆಯ ಕಣ..!

ಹುಬ್ಬಳ್ಳಿ,ಮೇ.9,ನ್ಯೂಸ್ ಎಕ್ಸ್ ಪ್ರೆಸ್:  ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ ಅವರಿಗೆ ಕುಂದಗೋಳ ವಿಧಾನಸಭೆ ಚುನಾವಣೆ ಟ್ರಬಲ್ ನೀಡುತ್ತಿದೆ. ಕುಂದಗೋಳದ ಉಪಚುನಾವಣೆಯ ಗೆಲುವು ಕಾಂಗ್ರೆಸ್ ಪಾಲಿನ ಪ್ರತಿಷ್ಠೆಯ ಕಣವಾಗಿದೆ. ಪೌರಾಢಳಿತ ಸಚಿವ  ಶಿವಳ್ಳಿ ಇಂದು ನಮ್ಮ ಜತೆಗಿಲ್ಲ. ಇಂದು ಆಕಸ್ಮಿತವಾಗಿ ಬಂದ ಚುನಾವಣೆಯು ಶಿವಳ್ಳಿಯ ಸೇವೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ ಹೇಳಿದರು.

ಕುಂದಗೋಳ ಕ್ಷೇತ್ರದ ಬೆಟದೂರು ಗ್ರಾಮದಲ್ಲಿಂದು ಮತಯಾಚನೆ ಸಂದರ್ಭದಲ್ಲಿ ಮಾತನಾಡಿದ ಅವರು, ಸಚಿವ  ಶಿವಳ್ಳಿ ನಿಧನಕ್ಕೆ ಸಮ್ಮೀಶ್ರ ಸರ್ಕಾರ ಕಾರಣವೆಂದು ಶ್ರೀರಾಮುಲು ನೀಡಿದ ಹೇಳಿಕೆ ನೋವಾಗಿದೆ. ಅದರ ಬಗ್ಗೆ ತನಿಖೆ ಮಾಡಿಸಲು ಸರಕಾರ ಕ್ರಮ ಕೈಗೊಳ್ಳುತ್ತದೆ. ಮೇ 23ಕ್ಕೆ ಈ ಸರ್ಕಾರಕ್ಕೆ ದೊಡ್ಡಶಕ್ತಿ ಬರುತ್ತದೆ.  ಪ್ರಚಾರದ ವೇಳೆ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ ಸ್ಮಾರಕಕ್ಕೆ ಭೇಟಿ ನೀಡಿದ ಅವರು, ಕೊಪ್ಪದ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos