ಉಪಚಾರ ಮಾಡಿದ ನಟ ಪ್ರೇಮ

ಉಪಚಾರ ಮಾಡಿದ ನಟ ಪ್ರೇಮ

ತುಮಕೂರು, ಆ. 12 : ಉಪಚಾರ ಮಾಡುವ ಮೂಲಕ ನಟ ಪ್ರೇಮ ಸುದ್ದಿಯಾಗಿದ್ದಾರೆ. ಅಪಘಾತವಾದ ವ್ಯಕ್ತಿಗೆ ಉಪಚಾರ ಮಾಡುವ ಮೂಲಕ ನಟ ಪ್ರೇಮ್ ಅವರು ಮಾನವೀಯತೆ ಮೆರೆದಿದ್ದಾರೆ. ನಟ ಪ್ರೇಮ್ ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಭೇಟಿ ತೆರಳುತ್ತಿದ್ದರು. ಈ ವೇಳೆ ತುಮಕೂರಿನ ಶಿರಾದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಚಿತ್ರದುರ್ಗ ಮೂಲದ ವ್ಯಕ್ತಿಯೊಬ್ಬರು ಬೈಕಿನಿಂದ ಕೆಳಗೆ ಬಿದಿದ್ದಾರೆ. ಪ್ರೇಮ್ ಅಂಬುಲೆನ್ಸ್ ಬರುವವರೆಗೂ ಕಾದು ನಿಂತು ಬಳಿಕ ಅಲ್ಲಿಂದ ತೆರೆಳಿದ್ದಾರೆ. ಅಪಘಾತದಲ್ಲಿ ಸಣ್ಣಪುಟ್ಟ ಗಾಯವಾಗಿರುವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತನ್ನ ಊರಿಗೆ ಮರಳಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂಬುದು ತಿಳಿದು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos