ಮಹಾನಾಯಕ ಬ್ಯಾನರ್ ಅನಾವರಣ

ಮಹಾನಾಯಕ ಬ್ಯಾನರ್ ಅನಾವರಣ

ಗೌರಿಬಿದನೂರು:ದೇಶ ಕಂಡ ಮಹಾನ್ ನಾಯಕ ಸಂವಿಧಾನ ಶಿಲ್ಪಿ ಡಾ,ಬಿ.ಅರ್.ಅಂಬೇಡ್ಕರ್ ಅವರ ಜೀವನ ಚರಿತ್ರೆ ಜೀ ಕನ್ನಡ ಧಾರವಾಹಿ ಪ್ರಸಾರವಾಗುತ್ತಿರುವುದು ನಿಜಕ್ಕೂ ಸ್ವಾಗರ್ತಹವಾಗಿದೆ, ಇದರಿಂದ ಇಂದಿನ ಮಕ್ಕಳಿಗೆ ಅವರ ಬಗ್ಗೆ ತಿಳಿಯಲು ಹೆಚ್ಚು ಸಹಕಾರಿಯಾಗಲಿದೆ ಎಂದು ಎಸ್‌ಐ ಲಕ್ಷ್ಮೀನಾರಾಯಣ್ ಹೇಳಿದರು.
ತಾಲೂಕಿನ ಮಂಚೇನಹಳ್ಳಿ ಹೋಬಳಿ ಕೇಂದ್ರದಲ್ಲಿ ಕರ್ನಾಟಕ ದಲಿತ ಸಿಂಹ ಘರ್ಜನೆ ಸಂಘಟನೆ ವತಿಯಿಂದ ಡಾ.ಬಿ.ಅರ್.ಅಂಬೇಡ್ಕರ್ ಅವರ ಜೀವನ ಚರಿತ್ರೆ ಮಹಾನಾಯಕ ಧಾರವಾಹಿಯ ಬ್ಯಾನರ್ ಅನಾವರಣಗೊಳಿಸಿ ಮಾತನಾಡಿ ವಿಶ್ವಜ್ಞಾನಿ ಡಾ.ಬಿ.ಅರ್.ಅಂಬೇಡ್ಕರ್ ಶೋಷಿತರ ಅಭಿವೃದ್ದಿಗೆ ಸಮಾನತೆಗೆ ಸಂವಿಧಾನ ರಚಿಸಿದ ಮಹಾನ್ ವ್ಯಕ್ತಿ ಅವರ ಅದರ್ಶಗಳು ಇಂದಿನ ಯುವಪೀಳಿಗೆಗೆ ಅದರ್ಶನೀಯವಾದುದ್ದು ಅವರ ಜೀವನ ಚರಿತ್ರೆ ಇದೀಗ ಜೀ ಕನ್ನಡ ಟಿವಿ ಯಲ್ಲಿ ಪ್ರಸಾರವಾಗುತ್ತಿದ್ದು ಅತ್ಯಂತ ಜನಪ್ರಿಯವಾಗಿ ವಿಕ್ಷೀಕರನ್ನೂ ಅರ್ಕಷಣೆ ಮಾಡುತ್ತಿದ್ದು ಇದರಿಂದ ಇಂದಿನ ಶಾಲೆ ಮಕ್ಕಳಿಗೆ ಅವರ ಸಂಪೂರ್ಣ ಜೀವನ ಅರಿಯಲು ಸಹಕಾರಿಯಾಗಲಿದೆ ಎಂದರು.
ಅದರೆ ಇತ್ತೀಚಿನ ದಿನಗಳಲ್ಲಿ ಕೆಲ ಕಿಡಿಗೆಡಿಗಳು ಮಹಾನ್ ವ್ಯಕ್ತಿಗಳ ಬಾವಚಿತ್ರಗಳನ್ನು ವಿರೂಪಗೊಳಿಸುವುದು ಹರಿದು ಹಾಕುತ್ತಿರುವುದು ಖಂಡನೀಯವಾದುದ್ದು,ಇದಕ್ಕೆ ಕಾನೂನಿನಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos