ನೀಲಿ ಚಿತ್ರಗಳಲ್ಲಿರುವಂತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ಪತಿಯ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ. ಆರೋಪಿ ಸುರೇಶ್ ಎಂಬಾತ ದೂರುದಾರ ಮಹಿಳೆಯ ಜೊತೆಯಲ್ಲಿ ಕಂಪನಿಯೊಂದರಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಅದಾಗಲೇ ದೂರುದಾರ ಮಹಿಳೆ ಗಂಡನಿಂದ ವಿಚ್ಛೇದನ ಪಡೆದಿದ್ದರು. ಕ್ರಮೇಣ ಪರಸ್ಪರ ಅಕರ್ಷಿತರಾಗಿ ವಿವಾಹಕ್ಕೆ ಅಣಿಯಾಗತೊಡಗಿದ್ದರು. ಆದರೆ ವಿಚ್ಛೇದಿತ ಮಹಿಳೆಯನ್ನು ಮದುವೆಯಾಗಲು ತನ್ನ ಪಾಲಕರು ಒಪ್ಪುವುದಿಲ್ಲ ಎಂದು ಕಾರಣ ನೀಡಿದ ಸುರೇಶ್, ಅವರನ್ನು ಒಪ್ಪಿಸಲು 20 ಲಕ್ಷ ಬೇಕು ಎಂದು ಮಹಿಳೆಯಿಂದ ವರದಕ್ಷಿಣೆ ಪಡೆದು ಮದುವೆಯಾಗಿದ್ದ. ಅದರೆ ಮದುವೆ ಬಳಿಕ ತನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಿದನಂತೆ. ನೀಲಿ ಚಿತ್ರಗಳನ್ನು ತೋರಿಸಿ ಅದರಲ್ಲಿರುವಂತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುತ್ತಿದ್ದ, ಒಪ್ಪದೇ ಇದ್ದಾಗ ತನ್ನ ಮೇಲೆ ಹಲ್ಲೆ ಮಾಡುತ್ತಿದ್ದ. ಈಗಾಗಲೇ ಮೊದಲ ಪತಿಯಿಂದ ಮಹಿಳೆಗೆ ಒಬ್ಬಳು ಮಗಳಿದ್ದು, ಆರೋಪಿ ಸುರೇಶ್ನನ್ನು ಮದುವೆಯಾದ ಬಳಿಕ ಮಕ್ಕಳಾಗದಂತೆ ಗರ್ಭಪಾತ ಮಾಡಿಸಿದ್ದೂ ಅಲ್ಲದೆ ಮನೆಯಲ್ಲಿ ಕೂತರೆ ಕೆಲಸಕ್ಕೆ ಹೋಗುವಂತೆ ಗಂಡ ಕಿರುಕುಳ ನೀಡ್ತಿದ್ದ, ಬಂದ ಸಂಬಳವನ್ನೆಲ್ಲಾ ಕಿತ್ತುಕೊಂಡು ಮಜಾ ಮಾಡುತ್ತಿದ್ದ ಇದಕ್ಕೆ ಆತನ ತಂದೆ-ತಾಯಿ ಕೂಡಾ ಸಾಥ್ ನೀಡುತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.