ಅಕ್ರಮ ಗಾಂಜಾ ವಶ, ಬಂಧನ

ಅಕ್ರಮ ಗಾಂಜಾ ವಶ, ಬಂಧನ

ಕೆಜಿಎಫ್: ಅಕ್ರಮ ದಾಸ್ತಾನು ಮಾಡಲಾಗಿದ್ದ ಸುಮಾರು ಒಂದು ಕೋಟಿ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡು ಒಬ್ಬನನ್ನು ರಾಬರ್ಟ್ಸನ್‌ಪೇಟೆ ವೃತ್ತದ ವಿಶೇಷ ಅಪರಾಧ ವಿಭಾಗದ ಪೊಲೀಸರು  ಬಂಧಿಸುವಲ್ಲಿ¸ಯಶಸ್ವಿಯಾಗಿರುವುದಾಗಿ ಕೇಂದ್ರ ವಲಯ ಐಜಿಪಿ ಸೀಮಾಂತ ಕುಮಾರ್ ಸಿಂಗ್ ತಿಳಿಸಿದರು.

ಕೆಜಿಎಫ್ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕೆಜಿಎಫ್ ಮಾರಿಕುಪ್ಪಂ ಸರಹದ್ದು ಕೃಷ್ಣಗಿರಿ ಲೈನಿನಲ್ಲಿ ಜೋಸೆಫ್ ಮತ್ತು ರಾಜ ಪಲ್ಲುರಾಜು ಎಂಬುವರು ಅಕ್ರಮವಾಗಿ ಗಾಂಜಾ ದಾಸ್ತಾನು ಮಾಡಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್, ಡಿವೈಎಸ್ಪಿ ಬಿ.ಕೆ. ಉಮೇಶ ಅವಡಿ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಎಂ.ಸೂರ್ಯಪ್ರಕಾಶ್, ತಬರೇ ಆಲಂಪಾಷ ಅವರ ನೇತೃತ್ವದ ಕೃಷ್ಣಗಿರಿ ಲೈನಿನಲ್ಲಿರುವ ಪುರೋಚ್ಚಿಕುಮಾರ್ ಮನೆಯ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ಶೇಖರಿಸಿಟ್ಟಿದ್ದ ಸುಮಾರು ಒಂದು ಕೋಟಿ ರೂ. ಬೆಲೆಬಾಳುವ ೧೮೬ ಕೆಜಿ ೬೫೦ ಗ್ರಾಂ ಗಾಂಜಾ ವಶಪಡಿಸಿಕೊಂಡು, ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಜೋಸೆಫ್ ಬಿನ್ ಜೇಮ್ಸ್ ಎಂಬಾತನನ್ನು ದಸ್ತಗಿರಿ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆಂದರು.

ಫ್ರೆಶ್ ನ್ಯೂಸ್

Latest Posts

Featured Videos