ಅವಿರೋಧ ಆಯ್ಕೆ

ಅವಿರೋಧ ಆಯ್ಕೆ

ಕೋಲಾರ: ಕೂಟೇರಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕೆಂಪಣ್ಣ ಹಾಗೂ ಉಪಾಧ್ಯಕ್ಷರಾಗಿ ಅಮರೇಶ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಐದು ವರ್ಷಗಳ ಆಡಳಿತ ಮಂಡಳಿ ಚುನಾವಣೆಯಲ್ಲಿ ಅವಿರೋಧವಾಗಿ ಸಾಮಾನ್ಯ ಕ್ಷೇತ್ರದಿಂದ ಕೆಂಪಣ್ಣ, ಅಮರೇಶ, ಮಂಜುನಾಥ, ನಾರಾಯಣಸ್ವಾಮಿ ನಾಗರಾಜಪ್ಪ, ಚಿಕ್ಕಕೃಷ್ಣಪ್ಪ, ವೇಣುಗೋಪಾಲ, ಅನುಸೂಚಿತ ಜಾತಿ ಮೀಸಲು ಕ್ಷೇತ್ರದಿಂದ ಕೆ.ವಿ.ನಾಗರಾಜ, ಮಹಿಳಾ ಮೀಸಲು ಕ್ಷೇತ್ರದಿಂದ ಕವಿತ ಮತ್ತು ಪದ್ಮಮ್ಮ ಹಾಗೂ ಹಿಂದುಳಿದ ವರ್ಗದ ಮೀಸಲು ಕ್ಷೇತ್ರದಿಂದ ವಿಶ್ವನಾಥಶೆಟ್ಟಿ ಮತ್ತು ಗೋವಿಂದಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದರು.
೧೨ ನಿರ್ದೇಶಕರುಗಳಲ್ಲಿ ಅಧ್ಯಕ್ಷರನ್ನಾಗಿ ಕೆಂಪಣ್ಣ ಮತ್ತು ಉಪಧ್ಯಕ್ಷರಾಗಿ ಅಮರೇಶ್‌ರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ವೆಂಕಟೇಶಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕೆ.ಎಂ.ಎಫ್. ಮಾಜಿ ನಿರ್ದೇಶಕ ರಾಮಕೃಷ್ಣೇಗೌಡ, ಸಹಕಾರ ಸಂಘದ ಮಾಜಿ ಅಧ್ಯಕ್ಷ ವೆಂಕಟಾಚಲಪತಿ, ಸಂಘದ ಕಾರ್ಯದರ್ಶಿ ಕೆ.ಗೋಪಾಲ್, ಗ್ರಾಮ ಪಂಚಾಯಿತಿ ಸದಸ್ಯೆ ಕವಿತ ನಾಗರಾಜ್, ಹಾಗೂ ವಾಲ್ಮೀಕಿ ಸಂಘದ ಮುಖಂಡ ಮುನೆಯ್ಯ, ಗ್ರಾಮದ ಪ್ರಮುಖರಾದ ನಂಜುಂಡಪ್ಪ, ವೆಂಕಟೇಶಪ್ಪ, ಗುರಪ್ಪನವರ ವೆಂಕಟೇಶಪ್ಪ ಮತ್ತು ಚರಣ್‌ರಾಜ್ ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos