ಜಾಧವ್ ಪುತ್ರಿ ಪೇಲ್ ಆಗೋಕೆ ಕಾಂಗ್ರೆಸ್ ಕಾರಣವಂತೆ..!

ಜಾಧವ್ ಪುತ್ರಿ ಪೇಲ್ ಆಗೋಕೆ ಕಾಂಗ್ರೆಸ್ ಕಾರಣವಂತೆ..!

ಬೆಂಗಳೂರು,ಮೇ.9,ನ್ಯೂಸ್ ಎಕ್ಸ್ ಪ್ರೆಸ್: ಇತ್ತಿಚಿಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಅಭ್ಯರ್ಥಿ ಉಮೇಶ ಜಾಧವ್ ಅವರ ಪುತ್ರಿ ಪೇಲ್ ಆಗಲು ಕಾಂಗ್ರೆಸ್ ಕಾರಣವೆಂದು ಹೇಳಿದ್ದಾರೆ. ಸಂಸದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್‍ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ‌.ಎಸ್.ಯಡಿಯೂರಪ್ಪನವರು ಪೋನ್​ ಮಾಡಿ ತರಾಟೆ ತೆಗೆದುಕೊಂಡಿದ್ದಾರೆ.

ಫೋನಿನಲ್ಲಿ ಯಡಿಯೂರಪ್ಪನವರು  ಮಾತನಾಡಿ, ನಿಮ್ಮ ಮಗಳ ವಿಚಾರ ನೀವು ಮಾಧ್ಯಮಗಳ ಮುಂದೆ ಪ್ರಸ್ತಾಪಿಸಿರುವ ಕಾರಣವೇನು? ನಿಮ್ಮ ವಿಚಾರ ಮಾತನ್ನಾಡುವುದನ್ನು ಬಿಟ್ಟು ಬೇರೆ ಎಲ್ಲಾ ಮಾತನ್ನಾಡಿದ್ದೀರಿ. ನೀವು ವಿದ್ಯಾವಂತರು,‌ ನಿಮ್ಮ ಮೇಲೆ ಎಲ್ಲರ ಕಣ್ಣಿದೆ. ಈ ರೀತಿಯ ಹೇಳಿಕೆಗಳು ನಿಮಗೆ ಮಾತ್ರವಲ್ಲದೇ ಪಕ್ಷಕ್ಕೂ ಡ್ಯಾಮೇಜ್ ತರುತ್ತದೆ. ನಿಮ್ಮ ರಾಜಕೀಯ ಭವಿಷ್ಯಕ್ಕೂ, ನಿಮ್ಮ ಮಗಳ ವಿದ್ಯಾಭ್ಯಾಸಕ್ಕೂ ಏನು ಸಂಬಂಧ? ನಿಮ್ಮ ಮಗಳು ಸರಿಯಾಗಿ ಓದಿಲ್ಲ. ಹಾಗಾಗಿ ಪರೀಕ್ಷೆಯಲ್ಲಿ ಅನುತೀರ್ಣವಾಗಿದ್ದಾರೆ. ಅದಕ್ಕೆ ಕಾಂಗ್ರೆಸ್ ಹೇಗೆ ಕಾರಣವಾಗುತ್ತೆ? ನಿಮ್ಮ ಹೇಳಿಕೆಯನ್ನು ನಾವು ಯಾರು ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಿ. ಇನ್ಮುಂದೆ ಇಂತಹ ಹೇಳಿಕೆಗಳನ್ನು ನೀಡಬೇಡಿ, ಇದಕ್ಕೆ  ಒಪ್ಪಿಗೆ ಸೂಚಿಸಿರುವ ಡಾ.ಉಮೇಶ್ ಜಾಧವ್, ಮಾಧ್ಯಮಗಳ ಮುಂದೆ ಮಾತನ್ನಾಡುವ ಮುನ್ನ ಎಚ್ಚರಿಕೆ ವಹಿಸುವುದಾಗಿದೆ ಎಂದರು.

 

ಫ್ರೆಶ್ ನ್ಯೂಸ್

Latest Posts

Featured Videos