ತುಮಕೂರು ಆಡಿಯೋ ವೈರಲ್: ದರ್ಶನ್ ವಿರುದ್ಧ ಪರಮೇಶ್ವರ್ ಗರಂ..!

ತುಮಕೂರು ಆಡಿಯೋ ವೈರಲ್: ದರ್ಶನ್ ವಿರುದ್ಧ ಪರಮೇಶ್ವರ್ ಗರಂ..!

ಬೆಳಗಾವಿ, ಏ. 26, ನ್ಯೂಸ್ ಎಕ್ಸ್ ಪ್ರೆಸ್: ತುಮಕೂರು ಕಾಂಗ್ರೆಸ್​ ಕಾರ್ಯಕರ್ತರ ಆಡಿಯೋ ಕ್ಲಿಪ್​ ವೈರಲ್​ ಆಗಿರುವ ಕುರಿತು ಡಿಸಿಎಂ ಪರಮೇಶ್ವರ್​​ ಪ್ರತಿಕ್ರಿಯಿಸಿದ್ದಾರೆ. ಸಂಸದ ಮುದ್ದಹನುಮೇಗೌಡ ಮತ್ತು ಕೆ ಎನ್​ ರಾಜಣ್ಣ ಹಣ ತಗೊಂಡಿಲ್ಲ. ಅವರ ವಿರುದ್ಧ ಅಪಪ್ರಚಾರ ಮಾಡಿರುವ ಕಾರ್ಯಕರ್ತ ದರ್ಶನ್​ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಸಿಎಂ ಹೇಳಿದ್ದಾರೆ. ತುಮಕೂರು ಸಂಸದ ಮುದ್ದಹನುಮೇಗೌಡ ಮತ್ತು ಕಾಂಗ್ರೆಸ್ ‌ಮುಖಂಡ‌ ರಾಜಣ್ಣ ಹಣ ಪಡೆದು ನಾಮಪತ್ರ ವಾಪಸ್​​ ಪಡೆದಿಲ್ಲವೆಂದು ಡಿಸಿಎಂ ಪರಮೇಶ್ವರ್​ ಸ್ಪಷ್ಟಪಡಿಸಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಣ ಪಡೆದು‌ ನಾಮಪತ್ರ ಹಿಂಪಡೆದಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿರುವ ಕುರಿತು ಪ್ರತಿಕ್ರಿಯಿಸಿದರು.

ಕಾರ್ಯಕರ್ತ ದರ್ಶನ್​ ಮಾಡಿರುವ ಆರೋಪ ನಿರಾಧಾರ. ಯಾವುದೇ ದಾಖಲೆ ಇಲ್ಲದೆ ಮಾತನಾಡುವುದು ಸರಿಯಲ್ಲ. ಹಣ ತೆಗೆದುಕೊಂಡು ರಾಜಕಾರಣ ‌ಮಾಡುವ ಅನಿವಾರ್ಯತೆ ಮುದ್ದಹನುಮೇಗೌಡ ಹಾಗೂ ರಾಜಣ್ಣ ಅವರಿಗಿಲ್ಲ. ಆರೋಪ ಮಾಡಿರುವ ದರ್ಶನ್​ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಫ್ರೆಶ್ ನ್ಯೂಸ್

Latest Posts

Featured Videos