ತುಮಕೂರು ಕ್ಷೇತ್ರದಲ್ಲಿ ಮತಚಲಾಯಿಸಿದ ಸಿದ್ದಗಂಗಾ ಸ್ವಾಮೀಜಿ

ತುಮಕೂರು ಕ್ಷೇತ್ರದಲ್ಲಿ ಮತಚಲಾಯಿಸಿದ ಸಿದ್ದಗಂಗಾ ಸ್ವಾಮೀಜಿ

ತುಮಕೂರು, ಏ. 18, ನ್ಯೂಸ್ ಎಕ್ಸ್ ಪ್ರೆಸ್: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಘಟಾನುಘಟಿಗಳು ಇಂದು ಮತ ಕ್ಷೇತ್ರಗಳಿಗೆ ತೆರಳಿ ಮತ ಚಲಾಯಿಸಿದರು.

ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗ ಸ್ವಾಮೀಜಿ ಗಳು ಮತ ಕ್ಷೇತ್ರಕ್ಕೆ ತೆರಳಿ ಮತ ಚಲಾಯಿಸಿದರು.

ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಮತ್ತು ಪತ್ನಿ ಭಾರತಿ ಶ್ರೀನಿವಾಸ್  ಶಿರಾ ತಾಲೂಕಿನ ಕಳ್ಳಂಬೆಳ್ಳದಲ್ಲಿ ಮಾಜಿ ಸಚಿವ ಟಿಬಿ ಜಯಚಂದ್ರ ಅವರು ಮತ ಚಲಾಯಿಸಿದರೆ ಪಾವಗಡದಲ್ಲಿ ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರು ಮತ ಹಾಕಿದರು.

ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಂಸದರಾದ ಜಿ.ಎಸ್.ಬಸವರಾಜ್ ಅವರು ಗಾಂಧಿನಗರದಲ್ಲಿ, ಹಾಲಿ ಸಂಸದ ಎಸ್.ಟಿ .ಮುದ್ದಹನುಮೇಗೌಡರು ಹೆಬ್ಬೂರಿನ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಶಾಸಕರಾದ ಜಿಬಿ ಜ್ಯೋತಿ ಗಣೇಶ್, ಮಾಜಿ ಶಾಸಕರಾದ ಡಾ. ರಫಿಕ್ ಅಹಮದï ಶಫಿ ಅಹಮದ್, ಮೇಯರ್ ಲತಾ ಜಾಂಗೀರ್ ರವಿ ಸೇರಿದಂತೆ ಹಲವಾರು ಗಣ್ಯಾತಿಗಣ್ಯರು ತಮ್ಮ ಮತ ಚಲಾಯಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos