ತುಮಕೂರಿನ ಋಣ ತೀರಿಸಿ ಹೋಗುತ್ತೇನೆ : ದೇವೇಗೌಡರು

ತುಮಕೂರಿನ ಋಣ ತೀರಿಸಿ ಹೋಗುತ್ತೇನೆ : ದೇವೇಗೌಡರು

ತುಮಕೂರು, . 16, ನ್ಯೂಸ್ ಎಕ್ಸ್ ಪ್ರೆಸ್: ತುಮಕೂರು ಲೋಕಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು, ಮುಂದೆ ಬರುವ 5 ವರ್ಷದಲ್ಲಿ ಈ ಜಿಲ್ಲೆಯ ಋಣ ತೀರಿಸಿ ಹೋಗುತ್ತೇನೆ ಎಂದು ಹೇಳಿದರು.

ನಗರದಲ್ಲಿ ಆಯೋಜಿಸಲಾಗಿದ್ದ ಮಡಿವಾಳ ಜನಾಂಗದ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ನಾಯಕರ ಒತ್ತಾಯದ ಮೇರೆಗೆ ತುಮಕೂರಿನಲ್ಲಿ ಸ್ಪರ್ಧಿಸುತ್ತಿದ್ದೇನೆ. ತುಮಕೂರಿನಲ್ಲಿ ನಾನು ನೋಡಿದ ಹಾಗೆ 29 ಸಣ್ಣ ಸಣ್ಣ ಸಮುದಾಯಗಳಿವೆ.

ರಾಜಕೀಯ ಜೀವನದಲ್ಲಿ ನಾನು ಹುಟ್ಟು ಹೋರಾಟಗಾರ. ನಿಮ್ಮನ್ನೆಲ್ಲ ಮುಂದೆ ತೆಗೆದುಕೊಂಡು ಹೋಗುವ ಆತ್ಮವಿಶ್ವಾಸವಿದೆ ಎಂದರು.

ಹಿಂದುಳಿದ 21 ಸಣ್ಣ ಜಾತಿಗಳಿಗೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರ ಸಭೆಗಳಲ್ಲಿ ಮೀಸಲಾತಿ ತಂದಿದ್ದೇನೆ. ಈ ಜಿಲ್ಲೆಯಲ್ಲಿ ಪರಿಸ್ಥಿತಿ ಅರ್ಥ ಮಾಡಿಕೊಂಡು ಸಣ್ಣ ಜಾತಿಗಳಿಗೆ ನೆರವಾಗಲು ಬದ್ಧನಾಗಿದ್ದೇನೆ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos