ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿ ಉತ್ತಮ, ಕಳಪೆ, ನಾಮಿನೇಷನ್ ಹೀಗೆ ಎಲ್ಲವೂ ಬಹಳ ಮುಖ್ಯವಾಗುತ್ತಿದ್ದು, ಮನೆಯ ನಿಯಮಗಳನ್ನು ಮೀರಿದರೆ ಅದಕ್ಕೆ ಶಿಕ್ಷೆ ಅಂತು ಖಂಡಿತ ಬಿಗ್ಬಾಸ್ ನೀಡಲಿದೆ. ಕಿಚ್ಚನ ಪಂಚಾಯ್ತಿಯಲ್ಲಿ ಎರಡು ಬಾರಿ ಸುದೀಪ್ ಹೇಳಿದ್ದರೂ, ಮತ್ತೆ ಮತ್ತೆ ಕಳಪೆ ನೀಡುವ ವಿಚಾರದಲ್ಲಿ ತಪ್ಪು ಮಾಡಿದ್ದಾರೆ.
ಆದ್ರೀಗ ಈ ವಾರ ಕಳಪೆಯನ್ನೇ ಪಡೆಯದೆ ತುಕಾಲಿ ಸಂತೋಷ್ ಜೈಲು ಸೇರಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಜೈಲಿಗೆ ಹೋಗುವುದು ಗಂಭೀರ ಶಿಕ್ಷೆಯಾಗಿದ್ದರೇ, ಕಳೆದ ವಾರ ತುಕಾಲಿ ಮಾತು ಕೇಳಿ ವರ್ತೂರು ಸಂತೋಷ್ ಜೈಲಿಂದ ಹೊರಗೆ ಬಂದಿದ್ದರು.
ಇದೇ ಕಾರಣಕ್ಕಾಗಿಯೇ ಕಿಚ್ಚನ ಪಂಚಾಯ್ತಿಯಲ್ಲಿ ತುಕಾಲಿಗೆ ಶಿಕ್ಷೆ ನೀಡಲು ಹೇಳಿ ಮನೆಯವರೆಲ್ಲ ಒಮ್ಮತದಿಂದ ತುಕಾಲಿಯನ್ನು ಜೈಲಿಗೆ ಹಾಕಲು ನಿರ್ಧರಿಸಿದರು.