ಬೆಂಗಳೂರು, ಜೂ. 19: ರೋಷನ್ ಬೇಗ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದೆ. ಕಾಂಗ್ರೆಸ್ ಪಕ್ಷದಿಂದ ತಮ್ಮನ್ನು ಅಮಾನತು ಮಾಡಿರುವ ಹಿನ್ನಲೆಯಲ್ಲಿ ಸತ್ಯ ಹೇಳೋದೇ ಅಪರಾಧನಾ? ಎಂದು ಕಾಂಗ್ರೆಸ್ ನ ಮಾಜಿ ಸಚಿವ ರೋಷನ್ ಬೇಗ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿರುವ ಹಿನ್ನಲೆ ಶಿವಾಜಿ ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ರೋಷನ್ ಬೇಗ್ ನಾನು ಏನು ಹೇಳಿದ್ದೇನೆ, ಅದು ಸತ್ಯ. ಸತ್ಯ ಹೇಳೋದು ಅಪರಾಧನಾ? ನಾನು ರಾಹುಲ್ ಗಾಂಧಿ ಬಗ್ಗೆ ಹೇಳಿಕೆ ನೀಡಿಲ್ಲ. ಈಗಲೂ ನಾನು ಒಬ್ಬ ಪಕ್ಷದ ಶಿಸ್ತಿನ ಕಾರ್ಯಕರ್ತ ಎಂದು ತಿಳಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಬಹಿರಂಗವಾಗಿ ಸಾಕಷ್ಟು ಜನರು ಪ್ರಚಾರ ಮಾಡಿದ್ದರು. ಅವರ ಮೇಲೆ ಮಾತ್ರ ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ . ಹಾಗಾದ್ರೆ ನಾನು ಸತ್ಯ ಹೇಳಿದ್ದೆ ತಪ್ಪಾಯ್ತಾ ಎಂದು ಪ್ರಶ್ನೆ ಮಾಡಿದ್ದಾರೆ.