ಹೊಸಕೋಟೆ, ನ. 20: ಸಚಿವರಾದಗಲೂ ನಮ್ಮ ಕೆಲಸವಾಗಿಲ್ಲ, ನಮ್ಮ ಸ್ವಾಭಿಮಾನಕ್ಕೆ ದಕ್ಕೆ ಬಂದಿದೆ ಅಂತ ರಾಜಿನಾಮೇ ಕೊಟ್ಟು ಬಂದವರು ನಾಗರಾಜ್. ನಿಜವಾದ ಸ್ವಾಭಿಮಾನಿ ಅಂದ್ರೆ ಅದು ಎಂಟಿಬಿ ನಾಗರಾಜ್, ನಾನು ಸ್ವಾಭಿಮಾನಿ ಅಂತ ಹೇಳಿಕೊಳ್ತಿರೋರು ಅಲ್ಲ. ಎಲ್ಲವನ್ನು ತ್ಯಾಗ ಮಾಡಿ ಬಂದ ಎಂಟಿಬಿ ನಾಗರಾಜ್ ಇಂದು ಇಲ್ಲಿ ಅಭ್ಯರ್ಥಿಯಾಗಿದ್ದಾರೆ.
ನಾಳೆ ನಾಮಪತ್ರಗಳ ವಾಪಸ್ ಸಮಯ ಮುಗಿದ ನಂತರ ನಿಜವಾದ ರಾಜಕೀಯ ಆರಂಭವಾಗುತ್ತೆ. ಕ್ಷೇತ್ರದ ಮತದಾರರ ಮನವೊಲಿಸಲೇಬೇಕು. ಅವರ ಕೈ ಕಾಲು ಹಿಡಿದಾದ್ರು ನಮ್ಮ ಪರ ಓಟ್ ಹಾಕಿಸಬೇಕಿದೆ. ಈ ಹಿಂದೆ ಸ್ಟ್ರೈಟ್ ಪೈಟ್ ಇತ್ತು, ಇದೀಗ ತ್ರಿಕೋನ ಸ್ವರ್ದೆ ಹೊಸಕೋಟೆಯಲ್ಲಿದೆ. ಹೊಸಕೋಟೆ ನಗರದ ಎಂಟಿಬಿ ಭವನದಲ್ಲಿ ವಿಸ್ತಾರಕರ ಸಭೆ ಉದ್ದೇಶಿಸಿ ಎಸ್ ಆರ್ ವಿಶ್ವನಾಥ್ ಹೇಳಿಕೆ.
ಹೊಸಕೋಟೆ ಕ್ಷೇತ್ರದಲ್ಲಿ ಜೆಡಿಎಸ್ ನಗಾಣ್ಯ. ಹೀಗಾಗೆ ಕುಮಾರಸ್ವಾಮಿ ಶರತ್ ಗೆ ಬೆಂಬಲ ಕೊಡ್ತಿನಿ ಅಂತ ಹೇಳಿದ್ದಾರೆ. ಇಲ್ಲಿ ಅವರು ಏನೆ ಮಾಡಿದ್ರು ಮೂರು ಸಾವಿರಗಂತ ಹೆಚ್ಚಿನ ಮತಗಳು ಪಡೆಯೋದಿಲ್ಲ. ಆದ್ರೆ ಈ ಭಾರಿ ಅದು ಇನ್ನೂ ಕಡಿಮೆಯಾಗುತ್ತೆ. ಕಳೆದ ಭಾರಿ ಹೆಚ್.ಡಿ.ಕೆ ಸಿಎಂ ಆಗಲಿ ಅಂತ ಒಕ್ಕಲಿಗರು ಮತ ಹಾಕಿದರು. ಆದರೆ, ಸಿಎಂ ಆದ ನಂತರ ಏನು ಮಾಡಿದ್ರು ಅನ್ನೂದನ್ನ ನೋಡಿದ್ದಾರೆ, ಅವರಿಗೆ ಈ ಭಾರಿ ಓಟ್ ಹಾಕಲ್ಲ. ಹೊಸಕೋಟೆಯಲ್ಲಿ ವಿಸ್ತಾರಕರ ಸಭೆ ಉದ್ದೇಶಿಸಿ ಎಸ್.ಆರ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.