ಮರಗಳ ಮಾರಣ ಹೋಮ :ಭೂಮಿ ಕಬಳಿಸಲೆತ್ನ!

ಮರಗಳ ಮಾರಣ ಹೋಮ :ಭೂಮಿ ಕಬಳಿಸಲೆತ್ನ!

ಕುಣಿಗಲ್: ಸರ್ಕಾರಿ ಗೋಮಾಳದ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ನೆಟ್ಟಿದ್ದ ಮರಗಳನ್ನು ಮಾಜಿ ಗ್ರಾಪಂ ಅಧ್ಯಕ್ಷರೊಬ್ಬರು ಸರ್ಕಾರಿ ಭೂಮಿ ಕಬಳಿಸಲು ಜೆಸಿಬಿ ಯಂತ್ರ ಬಳಸಿ ಬೆಳೆದು ನಿಂತಿದ್ದ ಮರಗಳನ್ನು ಕಡಿದು ಹಾಕಿಸಿದ್ದಾರೆ.
ಭೂಮಿ ಕಬಳಿಸಲು ಸಂಚು ರೂಪಿಸಿ ಅರಣ್ಯ ಮರ ಕಡಿಸಿರುವ ಅಧ್ಯಕ್ಷನನ್ನು ಕೂಡಲೇ ಬಂದಿಸುವಂತೆ ಒತ್ತಾಯಿಸಿದ್ದಾರೆ.
ಹುತ್ರಿದುರ್ಗ ಹೋಬಳಿ ಕಿತ್ನಾಮಂಗಲ ಸರ್ವೆ ನಂಬರ್ ೭೮ ರಲ್ಲಿ ಸುಮಾರು ೩೨೪ ಎಕರೆ ಸರ್ಕಾರಿ ಗೋಮಾಳ ಭೂಮಿಯಿದ್ದು, ಸಾಮಾಜಿಕ ಅರಣ್ಯ ಇಲಾಖೆ ೩೨ ಎಕರೆ ಭೂಪ್ರದೇಶದಲ್ಲಿ ಹಲವಾರು ರೀತಿಯ ಮರಗಳನ್ನು ಬೆಳೆಸಿದ್ದರು.
ಭೂಮಿ ಕಬಳಿಸಲು ಹುತ್ರಿದುರ್ಗ ಹೋಬಳಿ ಬೊಮ್ಮೇನಹಳ್ಳಿ ಪಾಳ್ಯದ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮೊಹಮ್ಮದ್ ಸಮೀವುಲ್ಲ ಎಂಬಾತ ಅಕ್ರಮವಾಗಿ ಸರ್ಕಾರಿ ಜಮೀನಿಗೆ ಪ್ರವೇಶ ಮಾಡಿದ್ದಲ್ಲದೆ ಸರ್ಕಾರಿ ಜಮೀನಿನಲ್ಲಿದ್ದ ಸುಮಾರು ನೂರಾರು ಮರಗಳನ್ನು ಕಡಿದು ಭೂಮಿ ಉಳುಮೆ ಮಾಡಿರುವುದು ಅಕ್ಷಮ್ಯ ಅಪರಾಧ.
ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಕೃತ್ಯ ಎಸಗಿರುವ ವ್ಯಕ್ತಿಯನ್ನು ಬಂಧಿಸುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos