ತೊಗಾಡಿಯಾ ಕಬ್ಬಡಿ ಕಪ್ ಪಂದ್ಯಾವಳಿ

ತೊಗಾಡಿಯಾ ಕಬ್ಬಡಿ ಕಪ್ ಪಂದ್ಯಾವಳಿ

ಪೀಣ್ಯ ದಾಸರಹಳ್ಳಿ, ಸೆ. 16: ಅಂತರ್ರಾಷ್ಟ್ರೀಯ ಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಬಜರಂಗದಳ ವತಿಯಿಂದ ಪೀಣ್ಯ 2ನೇ ಹಂತದ ಮುನಿ ಗಂಗಪ್ಪ ಮೈದಾನದಲ್ಲಿ ಆಯೋಜಿಸಲಾದ ಎರಡನೇ ವರ್ಷದ ಗಣೇಶೋತ್ಸವದ ಅಂಗವಾಗಿ ತೊಗಾಡಿಯಾ ಕಬಡ್ಡಿ ಕಪ್ ಪಂದ್ಯಾವಳಿ ಆಯೋಜಿಸಲಾಗಿತ್ತು. ರಾಜ್ಯದ 30 ತಂಡಗಳು ಭಾಗವಹಿಸಿದ್ದರು.

ಈ ಪಂದ್ಯದಲ್ಲಿ ಗೆದ್ದ ವಿಜೇತರಿಗೆ ಅಂತರರಾಷ್ಟ್ರೀಯ ಹಿಂದೂ ಪರಿಷತ್ ಅಧ್ಯಕ್ಷ ಪ್ರವೀಣ್ ಬಾಯ್ ತೊಗಾಡಿಯಾ ಬಹುಮಾನ ವಿತರಿಸಿದರು. ಪ್ರಥಮ ಬಹುಮಾನವಾಗಿ 15000 ನಗದು ಹಾಗೂ ಟ್ರೋಫಿ ಡಾ ನಾಗೇಶ್ ಜೈ ಮಾರುತಿ ಆಸ್ಪತ್ರೆ ತಂಡ ಪಡೆದರು. ದ್ವಿತೀಯ ಬಹುಮಾನ 10,000 ನಗದು ಹಾಗೂ ಟ್ರೋಫಿ ಎಚ್. ವೈ. ಸಿ. ಹೆಸರುಗಟ್ಟ ತಂಡ ಪಡೆದರು. ಮೂರನೆಯ ಬಹುಮಾನ ಮಲ್ಲತಳ್ಳಿ ತಂಡ 5 ಸಾವಿರ ನಗದು ಹಾಗೂ ಟ್ರೋಫಿ ಪಡೆದರು. ರಾಷ್ಟ್ರೀಯ ಬಜರಂಗ ದಳದ ರಾಜ್ಯಾಧ್ಯಕ್ಷ ವಿ. ಆನಂದ್, ರಾಷ್ಟ್ರೀಯ ಹೆಲ್ಪ್ಲೈನ್ ಅಧ್ಯಕ್ಷ ವಿಜಯಕುಮಾರ್ ರೆಡ್ಡಿ, ಕ್ಷೇತ್ರದ ಬಿಜೆಪಿ ಎಸ್ಸಿ/ ಎಸ್ಟಿ ಅಧ್ಯಕ್ಷ ರಾಮಣ್ಣ, ಮಾರುತಿ ಆಸ್ಪತ್ರೆಯ ಮಾಲೀಕ ಡಾಕ್ಟರ್ ನಾಗೇಶ್ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos