ಬೆಂಗಳೂರು, ಸೆ. 17: ನಗರದ HSR ಬಡಾವಣೆ ಬಳಿಯ ವೃಕ್ಷೋತ್ಸವ 2019 ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಯಾಗಿರುವ ಬಿ.ಎಸ್. ಯಡಿಯೂರಪ್ಪ ಅವರು ಆಗಮಿಸಿದ್ದಾರೆ.
ನಗರದ HSR ಬಡಾವಣೆ ಬಳಿಯ ಅಗತ್ಯ ಕೆರೆ ಉದ್ಯಾನವನದಲ್ಲಿ ನಡೆಯುತ್ತಿರೋ ಕಾರ್ಯಕ್ರಮ. ಇದಾದ ಬಳಿಕ ವಿಶೇಷ ವಿಮಾನದಲ್ಲಿ ಕಲಬುರಗಿಗೆ ತೆರಳಲಿರೋ ಮುಖ್ಯಮಂತ್ರಿ ಯಡಿಯೂರಪ್ಪ. ಈ ಸಂದರ್ಭದಲ್ಲಿ ಡಿಸಿಎಂ ಅಶ್ವತ್ಥನಾರಾಯಣ, ಸಂಸದ ತೇಜಸ್ವಿ ಸೂರ್ಯ, ಮೇಯರ್ ಗಂಗಾಂಬಿಕೆ ಸಾಥ್ ನೀಡಿದರು. ಅಗತ್ಯ ಕೆರೆ ಪುನಶ್ಚೇತನಕ್ಕೆ 5 ಕೋಟಿ ರೂ. ಬಿಡುಗಡೆ. ಕೆರೆ ಅಭಿವೃದ್ಧಿ ಕಾರ್ಯಕ್ಕೆ ಬಳಸಲು ಸೂಚನೆ. ಸಿಎಂ ಮಾಧ್ಯಮಗಳಿಗೆ ಮಾತನಾಡದೆ ಹೊರಟರು ಎಂದು ತಿಳಿದು ಬಂದಿದೆ.