ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನಿಯರಿಗೆ ಇಂದು ಸನ್ಮಾನ

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನಿಯರಿಗೆ ಇಂದು ಸನ್ಮಾನ

ಹುಬ್ಬಳ್ಳಿ, ಜ. 27: ನಗರದ ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ. ಧಾರವಾಡ ಜಿಲ್ಲಾ ಇಂಟೆಕ್ ಘಟಕ ಹಾಗೂ ಮಹಾನಗರ ಜಿಲ್ಲಾ ಮೈನಾರಿಟಿ ಘಟಕದ ವತಿಯಿಂದ ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಗೌರವ ಡಾಕ್ಟರೇಟ್ ಬಿರುದಿಗೆ ಭಾಜನರಾದ ಸಾಧಕರಿಗೆ ಇಂದು ಸಂಜೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಕಾಂಗ್ರೆಸ್ ಪಕ್ಷದ ಯುವ ಮುಖಂಡ  ವಿಜಯ ಕುಲಕರ್ಣಿ ಅವರಿಗೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ  ಸಾಧನೆ ಮಾಡಿ ಗೌರವ ಡಾಕ್ಟರೇಟ್ ಬಿರುದು ಪಡೆದ ಕಾಂಗ್ರೆಸ್ ಪಕ್ಷದ ಇನ್ನೋರ್ವ ಮುಖಂಡ  ಶರಣಪ್ಪ ಕೊಟಗಿ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯಲ್ಲಿ ರಾಷ್ಟ್ರೀಯ ಸಂಯೋಜಕರಾಗಿ ನೇಮಕಗೊಂಡ ಯುವ ಮುಖಂಡ. ಎಐಸಿಸಿ ಸದಸ್ಯರೂ ಆದ ಕಿರಣ ಮೂಗಬಸವ ಅವರನ್ನು ಸನ್ಮಾನಿಸಲಾಗುವುದು.

ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, .ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ  ಪಾರಸಮಲ್ ಜೈನ್, ಧಾರವಾಡ ಇಂಟೆಕ್ ಘಟಕದ ಅಧ್ಯಕ್ಷ  ಬಂಗಾರೇಶ ಹಿರೇಮಠ ಹಾಗೂ ಮಹಾನಗರ ಜಿಲ್ಲಾ ಮೈನಾರಿಟಿ ಅಧ್ಯಕ್ಷ  ಶಾರೂಖ ಮುಲ್ಲಾ ಸೇರಿದಂತೆ ಅನೇಕ ಮುಖಂಡರು ಆಗಮಿಸಲಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos