3 ನೇ ಗ್ರಾಮವಾಸ್ತವ್ಯ ಸಿಎಂ ಇಂದು ಬೀದರ್ ಗೆ

3 ನೇ ಗ್ರಾಮವಾಸ್ತವ್ಯ ಸಿಎಂ ಇಂದು ಬೀದರ್ ಗೆ

ಬೀದರ್, ಜೂ. 27: ರಾಜ್ಯದ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು,ರಾಜ್ಯದಲ್ಲಿ ಗ್ರಾಮವಾಸ್ತವ್ಯ ಮಾಡುತ್ತಿದ್ದು, ನೆನ್ನೆರಾಯಚೂರಿನ ಕರೇಗುಡ್ಡದಲ್ಲಿ ಗ್ರಾಮವಾಸ್ತವ್ಯ ಮಾಡಿದ ನಂತರ ಇಂದು ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಕಳೆದ ಒಂದು ವಾರದಿಂದ ಸಿಎಂ ಆಗಮನಕ್ಕಾಗಿ ಇಡೀ ಗ್ರಾಮದಲ್ಲಿ ವ್ಯಾಪಕ ಸಿದ್ಧತೆಗಳನ್ನು ನಡೆಸಲಾಗಿದೆ. ಬೆಳಗ್ಗೆ 5 ಕ್ಕೆ ಮಾನ್ವಿ ತಾಲೂಕಿನ ಕರೆಗುಡ್ಡ ಗ್ರಾಮದಿಂದರಸ್ತೆ ಮಾರ್ಗವಾಗಿ ಹೊರಟು, 10 ಗಂಟೆಗೆ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮಕ್ಕೆ ಆಗಮಿಸುವರು. ಇದು ಸಿಎಂ ಕುಮಾರಸ್ವಾಮಿ ಅವರ 3 ನೇ ಗ್ರಾಮವಾಸ್ತವ್ಯವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos