ಇನ್ನು ಆರು ತಿಂಗಳಲ್ಲಿ ಟಿಎಂಸಿ ಪಕ್ಷ ಇರಲ್ಲ

ಇನ್ನು ಆರು ತಿಂಗಳಲ್ಲಿ ಟಿಎಂಸಿ ಪಕ್ಷ ಇರಲ್ಲ

ಕೋಲ್ಕತಮೇ. 30, ನ್ಯೂಸ್‍ ಎಕ್ಸ್ ಪ್ರೆಸ್‍: ಪಶ್ಚಿಮ ಬಂಗಾಲದಲ್ಲಿ ಮುಂದಿನ ಸರಕಾರವನ್ನು ಭಾರತೀಯ ಜನತಾ ಪಕ್ಷ ರಚಿಸಲಿದೆ ಎಂಬ ವಿಶ್ವಾಸವನ್ನು ರಾಜ್ಯದ ರಾಯಗಂಜ್‌ನ ಬಿಜೆಪಿ ಸಂಸದೆ ದೇಬಶ್ರೀ ಚೌಧರಿ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರ ನೂತನ ಸಚಿವ ಸಂಪುಟಕ್ಕೆ ಸೇರುವ ಕರೆ ತನಗೆ ಬರಬಹುದೆಂಬ ವಿಶ್ವಾಸದಲ್ಲಿರುವ ದೇಬಶ್ರೀ ಅವರು ಎಎನ್‌ಐ ಜತೆ ಮಾತನಾಡುತ್ತಾ, ಪಶ್ಚಿಮ ಬಂಗಾಲದಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಯು ಏಕಪಕ್ಷೀಯವಾಗಲಿದೆ ಎಂದು ಹೇಳಿದರು.

ಇನ್ನು ಐದು-ಆರು ತಿಂಗಳಲ್ಲಿ ಪಶ್ಚಿಮ ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷವೇ ಇರುವುದಿಲ್ಲ; ಅದು ಸಂಪೂರ್ಣವಾಗಿ ನಶಿಸಿ ಹೋಗಿರುತ್ತದೆ; ಏಕೆಂದರೆ ಟಿಎಂಸಿಯ ಹೆಚ್ಚಿನೆಲ್ಲ ಶಾಸಕರು, ಕೌನ್ಸಿಲರ್‌ಗಳು ಬಿಜೆಪಿಗೆ ಸೇರುತ್ತಿದ್ದಾರೆ ಎಂದು ದೇಬಶ್ರೀ ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos