ಚಡ್ಡಿ ಹಾಕಿ ನಿಂತಿದ್ದವರಿಗೆ ಟಿಕೆಟ್

ಚಡ್ಡಿ ಹಾಕಿ ನಿಂತಿದ್ದವರಿಗೆ ಟಿಕೆಟ್

ಹಾಸನ, ಅ. 31 : ಚನ್ನಪಟ್ಟಣದ ಜೈಲಿನಲ್ಲಿ ಚಡ್ಡಿ ಮೇಲೆ ನಿಲ್ಲಿಸಿದ್ದವರನ್ನು ಕರೆದು ಜೆಡಿಎಸ್ನಲ್ಲಿ ಸ್ಥಾನ ನೀಡಲಾಗಿದೆ. ದೇವೇಗೌಡರು ಪಾದಯಾತ್ರೆ ಸಹ ಮಾಡಿದ್ದರು. ನೈತಿಕತೆ ಇದ್ದರೆ ಇವರು ಜೆಡಿಎಸ್ಗೆ ರಾಜೀನಾಮೆ ನೀಡಿ ಹೋಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು, ಮಂಡ್ಯದಲ್ಲಿ ನಮ್ಮ ಅಭ್ಯರ್ಥಿಗಳನ್ನು ಸೋಲಿಸಿದ್ದು ಇವರೇ. ಗೌರವ, ನೈತಿಕತೆ ಇದ್ದರೆ ಅವರು ರಾಜೀನಾಮೆ ನೀಡಲಿ. ಎಂಎಲ್ಸಿ, ಉಪಸಭಾಪತಿ ಮಾಡಿದ್ದು ಯಾರು? ಆದರೆ ಇವರು ನಾಲ್ಕು ವರ್ಷದಿಂದ ಯಾರ ಜೊತೆಗೆ ಓಡಾಡುತ್ತಿದ್ದಾರೆ ಎಂದು ತಿಳಿದಿದೆ. ಜೆಡಿಎಸ್ ಹಂಗಿನಲ್ಲಿ ಹೊಟ್ಟೆ ಉರಿಯುತ್ತಿರುವ ಇಂತವರಿಗೆ ಸೊಪ್ಪು ಹಾಕುವ ಅಗತ್ಯವಿಲ್ಲ ಎಂದು ಕಿಡಿ ಕಾರಿದರು

ಫ್ರೆಶ್ ನ್ಯೂಸ್

Latest Posts

Featured Videos