ಕೊಪ್ಪಳ, ಮಾ. 19, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯ ಸೀಟಿಗಾಗಿ ನಾನು ಯಾವುದೇ ರೀತಿ ಯಾರಿಗು ಒತ್ತಡ ಹಾಕ್ಕಿಲ್ಲ.
ಹೈಕಮಾಂಡ್ ನನ್ನನ್ನು ಕರೆದು ಈ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಕೊಪ್ಪಳ ಲೋಕಸಭಾ ಚುನಾವಣೆ ಹಿನ್ನೆಲೆ ಟಿಕೆಟ್ ನೀಡುವಂತೆ ಬಸವರಾಜ ರಾಯರೆಡ್ಡಿ ಹೈಕಮಾಂಡ್ ಗೆ ಒತ್ತಡ ಹೇರಿದ್ದಾರೆ ಎನ್ನಲಾಗಿತ್ತು.
ಒಂದು ವೇಳೆ ಹೈಕಮಾಂಡ್ ಕರೆದು ಟಿಕೆಟ್ ನೀಡುವುದಾಗಿ ತಿಳಿಸಿದರೆ ಯೋಚಿಸುವೆ ಎಂದು ಹೇಳಿದರು.
ಈ ಮಧ್ಯೆ ಟಿಕೆಟ್ ಗಾಗಿ ದೆಹಲಿ ಮಟ್ಟದಲ್ಲಿ ಲಾಬಿ ನಡೆಸಲಾಗುತ್ತಿದೆ. ಹಿಟ್ನಾಳ ಕುಟುಂಬದಿಂದಲೂ ಟಿಕೆಟ್ಗಾಗಿ ಹೈಕಮಾಂಡ್ಗೆ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ.