ರಾಜ್ಯದಲ್ಲಿ ಒಂದೂವರೆ ವರ್ಷದಲ್ಲಿ ಸಾವಿರಾರು ರೈತರ ಆತ್ಮಹತ್ಯೆ

ರಾಜ್ಯದಲ್ಲಿ ಒಂದೂವರೆ ವರ್ಷದಲ್ಲಿ ಸಾವಿರಾರು ರೈತರ ಆತ್ಮಹತ್ಯೆ

ಬೆಂಗಳೂರು: ಕರ್ನಾಟಕದಲ್ಲಿ ಒಂದೂವರೆ ವರ್ಷದಲ್ಲಿ 1,219 ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿಸಿಕ್ಕಿದೆ. ಬೀದರ,ಹಾವೇರಿ,ಮೈಸೂರು, ಬೆಳಗಾವಿ, ಚಿಕ್ಕಮಗಳೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚಿನ ರೈತರ ಸಾವನ್ನಪ್ಪಿದ ಸರ್ಕಾರದ ಅಂಕಿ ಅಂಶಗಳ ಪ್ರಕಾರ ( 1-4-2022 ರಿಂದ 31-3-2023) ವರೆಗೆ ಒಟ್ಟು 968 ರೈತರು ಸಾವನ್ನಪ್ಪಿದ್ದರೆ. ಈ ಪೈಕಿ 849 ಪ್ರಕರಣಗಳನ್ನು ಮಾತ್ರ ಸಂಬಂಧಪಟ್ಟ ಇಲಾಖೆ ಗಣನೆಗೆ ತೆಗೆದುಕೊಂಡಿದ್ದು ಪರಿಹಾರವನ್ನು ಕೂಡ ವಿತರಣೆ ಮಾಡಿದ್ದು, ಇನ್ನುಳಿದ111 ಅರ್ಜಿಗಳನ್ನು ತಿರಸ್ಕಾರ ಮಾಡಿದೆ.
2022-23 ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 43, ಧಾರವಾಡದಲ್ಲಿ 78, ಹಾವೇರಿಯಲ್ಲಿ 122, ಬೆಳಗಾವಿ -81, ಬೀದರ್- 36, ಚಿಕ್ಕಮಗಳೂರು- 53, ಕಲಬುರಗಿ- 50, ಮೈಸೂರು- 83, ಯಾದಗಿರಿ- 56 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ದಾಖಲಾಗಿದ್ದಾವೆ.
2015 ಕ್ಕಿಂತ ಮೊದಲು, ಪರಿಹಾರವ ಕಡಿಮೆ ಇತ್ತು, ಮತ್ತು ರೈತರ ಕುಟುಂಬಗಳು ಸಾಕಷ್ಟು ಪರಿಹಾರವನ್ನು ಪಡೆಯದ ಕಾರಣ ಆತ್ಮಹತ್ಯೆ ಪ್ರಕರಣಗಳು ಕಡಿಮೆ ಆಗಿದ್ದವು ಆದಾಗ್ಯೂ, ನಾವು 2015ರ ನಂತರ ಪರಿಹಾರವನ್ನು 5 ಲಕ್ಷ ರೂ.ಗೆ ಹೆಚ್ಚಿಸಿದಾಗಿನಿಂದ, ರೈತರ ಆತ್ಮಹತ್ಯೆಗಳ ಹೆಚ್ಚಿನ ವರದಿಗಳು ಬಂದಿವೆ. ಕೆಲವು ಸಂದರ್ಭಗಳಲ್ಲಿ, ವ್ಯಕ್ತಿಗಳು ಆರ್ಥಿಕ ಸಹಾಯದ ಅನ್ವೇಷಣೆಯಲ್ಲಿ ನೈಸರ್ಗಿಕ ಸಾವುಗಳನ್ನು ಆತ್ಮಹತ್ಯೆ ಎಂದು ಸುಳ್ಳು ವರದಿ ಮಾಡಬಹುದು ಎಂದು ಅವರು ಹೇಳಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos