ಕುಮಟಳ್ಳಿಗೆ ಶಾಕ್..!

ಕುಮಟಳ್ಳಿಗೆ  ಶಾಕ್..!

ಅಥಣಿ, ನ. 29 : ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿಗೆ ಸ್ವಗ್ರಾಮದ ಮತದಾರರು ಶಾಕ್ ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿಗೆ ಸ್ವಗ್ರಾಮ ತೆಲಸಂಗ ಗ್ರಾಮದಲ್ಲಿ ಮತದಾರರಿಂದ ಭಾರಿ ವಿರೋಧ ವ್ಯಕ್ತವಾಗಿದ್ದು,
ಅನರ್ಹ ಶಾಸಕರಿಗೆ ನಮ್ಮ ಗ್ರಾಮದಲ್ಲಿ ಪ್ರವೇಶಇಲ್ಲ ಎಂದು ಶಾಕ್ ನೀಡಿದ್ದಾರೆ. ಬ್ಯಾನರ್ಗಳು ಇಡೀ ಊರಿನಲ್ಲಿ ರಾರಾಜಿಸುತ್ತಿವೆ. ತೆಲಸಂಗ ಗ್ರಾಮ ಮಹೇಶ್ ಕುಮಟಳ್ಳಿ ಅವರ ಹುಟ್ಟೂರು. ಸ್ವಗ್ರಾಮದಲ್ಲಿ ಅವರಿಗೆ ಮತದಾರರಿಂದ ವಿರೋಧ ವ್ಯಕ್ತವಾಗಿರುವುದು ಚರ್ಚೆಗೆ ಗ್ರಾಸವಾಗಿದೆ.ಅಥಣಿ ಶಿವಯೋಗಿಗಳ ಪುಣ್ಯಕ್ಷೇತ್ರದಲ್ಲಿ ನಿಮಗೆ ಪ್ರವೇಶವಿಲ್ಲ. ಹಣಕ್ಕಾಗಿ ಶಾಸಕ ಸ್ಥಾನವನ್ನು ಮಾರಿಕೊಂಡವರಿಗೆ ಪ್ರವೇಶವಿಲ್ಲ ಎಂದು ಬ್ಯಾನರ್ ಹಾಕುವುದರ ಮೂಲಕ ಮಹೇಶ್ ಕುಮಟಳ್ಳಿಯ ವಿರುದ್ಧ ಅವರ ಸ್ವಗ್ರಾಮವಾದ ತೆಲಸಂಗ ಗ್ರಾಮದ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos