ಮೂಕ ವೇದನೆ ಅರಿತ ಗ್ರಾಮಸ್ಥರು

ಮೂಕ ವೇದನೆ ಅರಿತ ಗ್ರಾಮಸ್ಥರು

ದಾವಣಗೆರೆ, ನ.6 : ಗಂಭೀರವಾಗಿ ಗಾಯಗೊಂಡು ಕೋತಿಗೆ ಯುವಕರ ತಂಡ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದಲ್ಲಿ ನಡೆದಿದೆ.
ಕೋತಿಗೆ ಬೆನ್ನಿನ ಮೇಲೆ ಗಂಭೀರ ಗಾಯಗಳಾಗಿದ್ದು, ಗಾಯಕ್ಕೆ ಹುಳಗಳು ಸಹ ಬಿದ್ದಿದ್ದವು. ಮೂಕ ವೇದನೆಯ ಅರಿತ ಗ್ರಾಮಸ್ಥರು ಗ್ರಾಮದ ಯುವಕರು ಅದನ್ನು ಹಿಡಿದು ಪ್ರಾಥಮಿಕ ಚಿಕಿತ್ಸೆ ನೀಡಿ. ಆನಂತ ಅದಕ್ಕೆ ಬಾಳೆಹಣ್ಣು ತಿನ್ನಿಸಿ ಯುವಕರು ತಮ್ಮ ಸ್ವಂತ ಹಣದಲ್ಲಿ ಕೋತಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನೂ ಎರಡು ದಿನಗಳಲ್ಲಿ ಕೋತಿ ಚೇತರಿಕೆ ಆಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಯುವಕರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos