ಬೆಂಗಳೂರು, ಮೇ. 6, ನ್ಯೂಸ್ ಎಕ್ಸ್ ಪ್ರೆಸ್: ರಾಜಭವನದಲ್ಲಿ ರಾಜ್ಯಪಾಲ ವಜುಬಾಯಿ ವಾಲಾ ಅವರಿಂದ ಪ್ರಮಾಣ ವಚನ ಸ್ವೀಕರಿಸುವ ಮೂಲಕ ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರಾಗಿ ಎನ್ ಸಿ ಶ್ರೀನಿವಾಸ್ ಅವರು ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು.
ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಇಂದು ರಾಜ್ಯದ ನೂತನ ಮಾಹಿತಿ ಆಯೋಗದ ಅಧ್ಯಕ್ಷರಾಗಿ, ಎನ್ ಸಿ ಶ್ರೀನಿವಾಸ್ ಅಧಿಕಾರವನ್ನು ರಾಜ್ಯಪಾಲ ವಜುಬಾಯಿ ವಾಲಾ ಅವರಿಂದ ಪ್ರಮಾಣ ಸ್ವೀಕರಿಸುವ ಮೂಲಕ ಅಧಿಕಾರ ವಹಿಸಿಕೊಂಡಿದ್ದಾರೆ.
ರಾಜ್ಯಪಾಲ ವಜುಬಾಯಿ ವಾಲಾ, ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ, ಎನ್ ಸಿ ಶ್ರೀನಿವಾಸ್ ಅವರು ಮುಖ್ಯ ಮಾಹಿತಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರೇ, ಇವರೊಂದಿಗೆ ಆಯುಕ್ತರಾಗಿ ಎಸ್ ಎಂ ಸೋಮಶೇಖರ್ ಹಾಗೂ ಕೆಪಿ ಮಂಜುನಾಥ್ ಅಧಿಕಾರ ಸ್ವೀರಿಸಿದರು.
ನಿವೃತ್ತ ಪೊಲೀಸ್ ಅಧಿಕಾರಿ ಮೊಹಮ್ಮದ್ ವಜೀರ್ ಅಹ್ಮದ್ ಎಂಬುವರು ಅಡ್ವೊಕೇಟ್ ಜನರಲ್ ಗೆ ನೀಡಿದ್ದ ಮುಚ್ಚಳಿಕೆ ಉಲ್ಲಂಘಿಸಿ, ರಾಜ್ಯ ಮಾಹಿತಿ ಆಯುಕ್ತರನ್ನು ನೇಮಕ ಮಾಡಿಕೊಳ್ಳಲಾಗಿದೆ.