ಧಾರವಾಡ, ಡಿ. 19: ನವಲಗುಂದ ತಾಲೂಕಿನ ಅಮರಗೋಳ ಗ್ರಾಮದಲ್ಲಿ ಬುಧವಾರ ಏತ ನೀರಾವರಿ ಯೋಜನೆ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಿಎಂ ಅಭಿಮಾನಿ ‘ಯಡಿಯೂರಪ್ಪ ರಾಜಾಹುಲಿ’ಎಂದ ಘೊಷಣೆ ಗಮನ ಸೆಳೆದಿದೆ.
ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡುವಾಗ, ವೇದಿಕೆ ಎದುರು ಕುಳಿತಿದ್ದ ಅಭಿಮಾನಿ ‘ಇದು ಕೇವಲ ರಾಜಾಹುಲಿ ಅಲ್ಲ, ಶಿಕಾರಿ ಮಾಡುವ ಹುಲಿ. ಸುಮ್ಮನೆ ಬಂದು ಹೋಗುವ ಹುಲಿ ಇದಲ್ಲ’ ಎಂದು ಹೇಳಿದಾಗ ಯಡಿಯೂರಪ್ಪ ಅವರೂ ನಸುನಕ್ಕರು.