ಬಳ್ಳಾರಿ, ನ. 7 : ಜಮೀನನಲ್ಲಿ ಭತ್ತ ಕಟಾವು ಮಾಡುವಾಗ ಹೆಬ್ಬಾವು ಸಾವನಪ್ಪಿರುಬ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ದುರ್ಗಪ್ಪಾ ಅವರ ಜಮೀನಿನಲ್ಲಿ ಭತ್ತ ಕಟಾವು ಮಾಡುವ ಸಂದರ್ಭದಲ್ಲಿ ಕಟಾವು ಯಂತ್ರಕ್ಕೆ ಸಿಲುಕಿ ಹೆಬ್ಬಾವುವೊಂದು ಹೆಬ್ಬಾವು ಸಾಯಿಸಿದ ಆರೋಪದ ಮೇಲೆ ರೈತರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ದೇಶನೂರು ಗ್ರಾಮದ ರೈತರು ಕೂಡಲೇ ದುರ್ಗಪ್ಪಾ ಅವರನ್ನು ಬಿಡುಗಡೆ ಮಾಡುವಂತೆ ಪ್ರತಿಭಟನೆ ನಡೆಸಿದ್ದಾರೆ. ದೇಶನೂರು ಗ್ರಾಮದ ನಿವಾಸಿ ದುರ್ಗಪ್ಪಾ ಬಂಧಿತ ರೈತ.
ಉದ್ದೇಶ ಪೂರ್ವಕವಾಗಿಯೇ ಇಂಡಿಯನ್ ರಾಕ್ ಪೈಥಾನ್ ಅಪರೂಪದ ಜಾತಿಯ ಹಾವನ್ನು ಕೊಂದಿದ್ದೀರಾ ಎಂದು ದುರ್ಗಪ್ಪಾ ಅವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಈ ಕಾರಣಕ್ಕೆ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳು ಸರಿಯಾಗಿ ಪರಿಶೀಲಿಸಿ ಕ್ರಮ ಕೈಗೊಳುವಂತೆ ಒತ್ತಾಯಿಸಿದ್ದಾರೆ.