ಕಲಬುರ್ಗಿ, ಫೆ. 05: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಎಚ್.ಎಸ್.ವೆಂಕಟೇಶ ಮೂರ್ತಿಯವರ ಮೆರವಣಿಗೆ ಮಾಡಲಾಯಿತು.
ಮೆರವಣಿಗೆ ವಾಹನದಲ್ಲಿ ಎಚ್ಎಸ್ವಿ ಜತೆ ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್ ಇದ್ದರು. ಎಸ್ಎಂ ಪಂಡಿತ್ ರಂಗಮಂದಿರದಿಂದ ಮೆರವಣಿಗೆ ಆರಂಭವಾಗಿದ್ದು, ಕಲಬುರ್ಗಿ ವಿಶ್ವವಿದ್ಯಾಲಯದ ಆವರಣದವರೆಗೆ ಆರು ಕಿ.ಮೀ.ಗಳಷ್ಟು ದೂರ ನಡೆಯಲಿದೆ. 60 ವಿವಿಧ ಕಲಾತಂಡಗಳು ಭಾಗಿಯಾಗಿವೆ.