ಪೇದೆಗೆ ಇರಿದ ಕಿಡಿಗೇಡಿಗಳು

ಬೆಂಗಳೂರು, ಡಿ. 1 : ಹೆಣ್ಣುಮಕ್ಕಳನ್ನು ಚುಡಾಯಿಸುತ್ತಿದ್ದ ಪುಂಡರನ್ನು ವಶಕ್ಕೆ ಪಡೆದು ಠಾಣೆಗೆ ಕರೆತರುತ್ತಿದ್ದ ಮುಖ್ಯಪೇದೆಗೆ ಇಬ್ಬರು ದುಷ್ಕರ್ವಿುಗಳು ಚೂರಿಯಿಂದ ಇರಿದು ತಪ್ಪಿಸಿಕೊಂಡಿದ್ದಾರೆ.
ಆರ್.ಟಿ. ನಗರ ಸಮೀಪ ಚಾಮುಂಡಿನಗರದಲ್ಲಿ ಶನಿವಾರ ಮಧ್ಯಾಹ್ನ 12 ಗಂಟೆಗೆ ಕೃತ್ಯ ನಡೆದಿದೆ. ಆರ್. ಟಿ. ನಗರ ಠಾಣೆ ಮುಖ್ಯಪೇದೆ ನಾಗರಾಜ್ ಹಲ್ಲೆಗೆ ಒಳಗಾದವರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳಾದ ಕಂಡಾಳ ಮತ್ತು ಮರ್ದಾನ್ ಪತ್ತೆಗೆ ಬಲೆಬೀಸಲಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos