ದಾಳಿಂಬೆ ಬೆಳೆಗೆ ಬೆಂಕಿ ಇಟ್ಟ ದುಷ್ಕರ್ಮಿಗಳು

  • In State
  • January 10, 2019
  • 263 Views
ದಾಳಿಂಬೆ ಬೆಳೆಗೆ ಬೆಂಕಿ ಇಟ್ಟ ದುಷ್ಕರ್ಮಿಗಳು

ಬಳ್ಳಾರಿ: ಆ ರೈತ ಸಾಲ ಮಾಡಿ ದಾಳಿಂಬೆ ಬೆಳೆ ಬೆಳೆದಿದ್ದ, ದಾಳಿಂಬೆ ಬೆಳೆಯನ್ನು ಇನ್ನೂ 4 ದಿನಗಳಲ್ಲಿ ಬಿಡಿಸಿ ಮಾರುಕಟ್ಟೆಗೆ ಕಳಿಸಬೇಕು ಎನ್ನುವಷ್ಟರಲ್ಲಿ, ಆ ದಾಳಿಂಬೆ ಗದ್ದೆಗೆ ಬೆಂಕಿ ಬಿದ್ದಿದೆ.

ಗಣಿನಾಡು ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ಈ ರೀತಿಯ ದುಷ್ಟ ಕೆಲಸ ಮಾಡಿದ್ದಾರೆ. ಸುಟ್ಟು ಕರಕಲಾಗಿರುವ ದಾಳಿಂಬೆ ಗಿಡಗಳನ್ನು ನೋಡಿ ರೈತ ಚಟಪಡಿಸುತ್ತಿದ್ದಾನೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

ಇನ್ನೇನು ದಾಳಿಂಬೆ ಬೆಳೆ ಕೈಗೆ ಬರಬೇಕು ಎನ್ನುವಷ್ಟರಲ್ಲಿ 6 ಎಕರೆ ದಾಳಿಂಬೆ ಬೆಳೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ರೈತ ನಾಗರಾಜ್ ಗೆ ಸೇರಿದ ದಾಳಿಂಬೆ ಬೆಳೆಗೆ ಬೆಂಕಿ ಇಟ್ಟಿದ್ದಾರೆ. ಇದರಿಂದ ರೈತ ನಾಗರಾಜ್ ಕಂಗಾಲಾಗಿದ್ದು, ದಿಕ್ಕು ತೋಚದಂತಾಗಿದೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos