=
ಯಲಹಂಕ, ಆ. 22: ಬೆಂಗಳೂರು ಉತ್ತರ ತಾಲ್ಲೋಕು ಹುಸ್ಕೂರು ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಸಭೆಯನ್ನು ಮಾಡಲಾಯಿತು. ಗ್ರಾಮ ಸಭೆಯ ಸಂದರ್ಭದಲ್ಲಿ ಹಲವು ಇಲಾಖೆಗಳ ಅಧಿಕಾರಿಗಳ ಗೈರು ಹಾಜರಿಯಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯರ ಅನುದಾನಗಳಡಿಯಲ್ಲಿ ಕಾಮಗಾರಿಗೆ ದೊರೆಯಬಹುದಾದ ಹಣವನ್ನು ಮಂಜೂರು ಮಾಡಿಲ್ಲದಿರುವ ಕಾರಣ ಬೆತ್ತನಗೆರೆ ಸದಸ್ಯೆ ನಾಗರತ್ನಮ್ಮ ಲಕ್ಷ್ಮಯ್ಯ ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಆಹಾರ ಇಲಾಖೆಯಿಂದ ರೇಷನ್ ಕಾರ್ಡ್ ನೀಡಲಾಯಿತು. ಗ್ರಾಮ ಸಭೆಯ ಅಧ್ಯಕ್ಷತೆ ಜಿ ಸೋಮಶೇಖರ್, ಎಂ ರವಿಕುಮಾರ್, ಈ ರವಿಕಮಾರ್, ಉಪಾಧ್ಯಕ್ಷೆ ಪದ್ಮ ಮಂಜುನಾಥ್, ಸದಸ್ಯರು ಭಾಗವಹಿಸಿದ್ದರು.