‘ಅನ್ನಭಾಗ್ಯ’ಕೊಟ್ಟ ರಾಜ್ಯ ಕರ್ನಾಟಕ

‘ಅನ್ನಭಾಗ್ಯ’ಕೊಟ್ಟ ರಾಜ್ಯ ಕರ್ನಾಟಕ

ಮಂಡ್ಯ , ನ. 21: ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಪಕ್ಷಾಂತರ ಮಾಡಿದ್ದಾರೆ. ಅವರನ್ನು ಅವರೇ ಮಾರಾಟ ಮಾಡಿಕೊಂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ಎತ್ತು, ಕೋಳಿ, ಕುರಿ, ಕೋಣ ಮಾರಾಟವಾಗುವುದು ಸಾಮಾನ್ಯ. ಆದರೆ, ಎಂಎಲ್ಗಳು ಖರೀದಿ ಮಾಡೋದು ಎಷ್ಟು ಸರಿ ಎಂದು ವಾಗ್ದಾಳಿ ನಡೆಸಿದರು.

ಇನ್ನು ಸಿಎಂ ಬಿಎಸ್ ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗ ಶಾಸಕರನ್ನು ಖರೀದಿಸೋದನ್ನು ಚಾಳಿ ಮಾಡಿಕೊಂಡಿದ್ದಾರೆ. ಅವನ್ಯಾರೋ ಶ್ರೀರಾಮುಲು ಹೇಳುತ್ತಾನೆ; ಅನರ್ಹರು ಅಂತ ಕರಿಬೇಡಿ. ಸಿದ್ದರಾಮಯ್ಯನವರು ಪಕ್ಷಾಂತರ ಮಾಡಿಲ್ವಾ ಅಂತ. ನಾನು ಜೆಡಿಎಸ್ ಬಿಡಲಿಲ್ಲ, ಪಕ್ಷದಿಂದ ನನ್ನ ಹೊರ ಹಾಕಿದರು. ನಾನು ಉಚ್ಚಾಟನೆ ಬಳಿಕ ಅಹಿಂದ ಸಂಘಟನೆ ಮಾಡಿದೆ. ಬಳಿಕ ಕಾಂಗ್ರೆಸ್ ಆಹ್ವಾನ ಮಾಡಿದ ನಂತರ ಪಕ್ಷ ಸೇರಿದೆ. ಇತಿಹಾಸವನ್ನು ತಿಳಿದುಕೊಳ್ಳಲ್ಲ, ಪ್ರಜಾ ಪ್ರತಿನಿಧಿ ಕಾಯ್ದೆ 10 ಶೆಡ್ಯೂಲ್ ಓದಿಕೊಂಡಿಲ್ಲ. ಏನೆನೋ ಮಾತಾಡುತ್ತಾರೆ ಏನ್ ಹೇಳಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ಗುಡುಗಿದರು.

ಫ್ರೆಶ್ ನ್ಯೂಸ್

Latest Posts

Featured Videos