ಚಿತ್ರದುರ್ಗ, ಡಿ. 13: ಗ್ರಾಹಕರಿಗೆ ನಿದ್ದೆಯಲ್ಲೂ ಕಣ್ಣೀರು ಬರಿಸುತ್ತಿದ್ದ ಈ ಈರುಳ್ಳಿ ಇಂದು ಮಾರುಕಟ್ಟೆಯಲ್ಲಿ ಸುಮಾರು 100 ರೂಪಾಯಿಗೆ ಒಂದು ಕೆ.ಜಿ ಬೆಲೆಯಾಗಿದೆ. ಇದು ಒಂದು ಕಡೆಯಾದ್ರೆ ಇನ್ನೊಂದು ಕಡೆ ಈರುಳ್ಳಿ ಬೆಳೆಗಾರ ಮುಖದಲ್ಲಿ ಮಂದಹಾಸ ಬೀರುವಂತೆ ಮಾಡಿದೆ. ಅದರಂತೆ ಚಿತ್ರದುರ್ಗ ತಾಲೂಕು ದೊಡ್ಡ ಸಿದ್ದವ್ವನಹಳ್ಳಿ ಗ್ರಾಮದ ರೈತ ಮಲ್ಲಿಕಾರ್ಜುನ ಎಂಬ ರೈತ ತನ್ನ 20 ಎಕರೆ ಜಮೀನಿನಲ್ಲಿ ಈರುಳ್ಳಿಯನ್ನು ಬೆಳೆದಿದ್ದಾರೆ. ಇದಕ್ಕಾಗಿ ಅವರು 12 ರಿಂದ 15 ಲಕ್ಷ ಖರ್ಚು ಮಾಡಿದ್ದಾರೆ.
ಮನೆ ಮಕ್ಕಳು ಎಲ್ಲರೂ ಕಷ್ಟ ಪಟ್ಟಿರುವುದರಿಂದ ಇಂದು ಸುಖ ಸಿಕ್ಕಿದೆ. ತಮ್ಮ ಜಮೀನು ಅಲ್ಲದೆ ಬೇರೆಯವರ ಜಮೀನಿನನ್ನು ಗುತ್ತಿಗೆ ಪಡೆದು ಅದರಲ್ಲೂ ಬೆಳೆದಿದ್ದೆವೆ. ಇದರಲ್ಲಿಕಷ್ಟನೂ ಇದೆ ಸುಖಾನು ಇದೆ. ಈ ಸಾರಿ ಸಾಕಷ್ಟು ಲಾಭ ಸಿಕ್ಕಿದೆ ಎಂದು ಖುಷಿಯಿಂದ ಹೇಳುತ್ತಾರೆ.