ಯಶವಂತಪುರ, ಅ. 28: ನಾನು ಜೆಡಿಎಸ್ ಪಕ್ಷ ಬಿಟ್ಟು ಎಲ್ಲಿಗೂ ಹೋಗೊಲ್ಲ, ನಾನು ಗೆದ್ದರು ಸೋತರು ನನಗೆ ನನ್ನ ಮಾತೃಪಕ್ಷವೇ ಮುಖ್ಯ ಎಂದು ಜವರಾಯಿಗೌಡ ಹೇಳಿದರು.
ಬೆಂಗಳೂರು ಹೊರವಲಯ ತಾವರೆಕೆರೆ ಹೋಬಳಿಯ ಚನ್ನೇನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಉಪಚುನಾವಣೆ ಪ್ರಯುಕ್ತ ಕಾರ್ಯಕರ್ತರು ಪೂರ್ವಭಾವಿ ಸಬೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನನಗೆ ಕಾಂಗ್ರೆಸ್ ನಾಯಕರಿಂದ ಆಹ್ವಾನ ಇತ್ತು, ಆದರೂ ನಾನು ಪಕ್ಷಾಂತರ ಮಾಡುವುದಿಲ್ಲ ಎಂದ ಅವರು ನನಗೆ ರಾಜಕಾರಣದಿಂದ ಹಣ ಮಾಡಬೇಕೆಂಬ ಆಸೆ ಇಲ್ಲ. ದೇವರು ಸಾಕಷ್ಟು ಕೊಟ್ಟಿದ್ದಾನೆ, ಜನಗಳ ಸೇವೆ ಮಾಡುವುದು ಮತ್ತು ಜೆಡಿಎಸ್ ಪಕ್ಷವನ್ನು ಕ್ಷೇತ್ರದಲ್ಲಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಾನು ಶಾಸಕನಾಗಬೇಕಾಗಿದೆ ಎಂದರಲ್ಲದೆ ಯಶವಂತಪುರ ಕ್ಷೇತ್ರದಲ್ಲಿ ನಡೆಯುವ ಈ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಬೇರು ಗಟ್ಟಿ ಮಾಡಿ ಮುಂದಿನ ಗ್ರಾಮಪಂಚಾಯ್ತಿಗೆ ಸಜ್ಜಾಗೋಣ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.