ಬೆಂಗಳೂರು, ಫೆ.28, ನ್ಯೂಸ್ಎಕ್ಸ್ ಪ್ರೆಸ್: ಟೀಮ್ ಇಂಡಿಯಾ ವಿರುದ್ಧದ 2 ಟಿ-20 ಪಂದ್ಯಗಳ ಸರಣಿಯನ್ನ, ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿದೆ. ವೈಜಾಕ್ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿದ್ದ ಆಸಿಸ್, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಭರ್ಜರಿ ವಿಜಯೋತ್ಸವ ಆಚರಿಸಿದೆ.
ನಾಡಿನ ಎಡಗೈ ಸ್ಪಿನ್ನರ್ ಎಸ್.ಶ್ರೀರಾಮ್ ಮತ್ತು ಹರಿಯಾಣದ ಲೆಗ್ಸ್ಪಿನ್ನರ್ ಪ್ರದೀಪ್ ಸಾಹು..! ಎಸ್.ಶ್ರೀರಾಮ್ ಮತ್ತು ಪ್ರದೀಪ್ ಸಾಹು, ಸದ್ಯ ಆಸ್ಟ್ರೇಲಿಯಾ ಕೋಚಿಂಗ್ ಸ್ಟಾಫ್ ಜೊತೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಟಿ-20 ಮತ್ತು ಏಕದಿನ ಸರಣಿಗಾಗಿ ಈ ಇಬ್ಬರು ಆಟಗಾರರನ್ನ ಆಸಿಸ್ ಒಪ್ಪಂದ ಮಾಡಿಕೊಂಡಿದೆ. ಭಾರತೀಯ ಪಿಚ್ಗಳ ಬಗ್ಗೆ ಇವರಿಬ್ಬರಿಂದಲೇ ಸಂಪೂರ್ಣ ಮಾಹಿತಿ ಕೂಡ ಪಡೆದುಕೊಳ್ಳುತ್ತಿದೆ. ಶ್ರೀರಾಮ್ ,ಪ್ರದೀಪ್ ಸಾಹು ಇಬ್ಬರಿಗೂ, ಇಲ್ಲಿನ ಪಿಚ್ಗಳ ಬಗ್ಗೆ ಚೆನ್ನಾಗಿ ಗೊತ್ತು. ಈ ಇಬ್ಬರು ಭಾರತೀಯ ಆಟಿಗರನ್ನ ಅಸ್ತ್ರವಾಗಿ ಬಳಸಿಕೊಂಡು, ಕೊಹ್ಲಿ ಸೈನ್ಯದ ವಿರುದ್ಧ ಗೆಲುವು ಸಾಧಿಸುತ್ತಿದೆ. ಅಷ್ಟೇ ಅಲ್ಲ..! ಶ್ರೀರಾಮ್ ಮತ್ತು ಪ್ರದೀಪ್, ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳ ಎಲ್ಲ ಮಾಹಿತಿಗಳನ್ನು, ಎದುರಾಳಿಗಳಿಗೆ ತಿಳಿಸಿಕೊಡುತ್ತಿದ್ದಾರೆ. ಈ ಇಬ್ಬರೂ ಭಾರತೀಯರು ಈಗ ಟೀಮ್ ಇಂಡಿಯಾಕ್ಕೆ ಹಿತಶತ್ರುಗಳಾಗಿ ಕಾಡುತ್ತಿದ್ದಾರೆ.