ನೆಲಮಂಗಲ, ನ. 25: ಪತಿಯೇ ಪತ್ನಿಯನ್ನ ಅಪಹರಿಸಲು ಯತ್ನಿಸಿದಾಗ ಸಾರ್ವಜನಿಕರೇ ಹಿಗ್ಗಾಮಗ್ಗಾ ಥಳಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ. ಪತ್ನಿ ರಾಧರವರ ಶೀಲವನ್ನು ಶಂಕಿಸಿ ಪತ್ನಿ ರವಿಕುಮಾರ್ ನಿತ್ಯ ಕಿರುಕುಳ ನೀಡುತ್ತಿದ್ದನು. ಇದರಿಂದ ಬೇಸತ್ತ ಹೆಂಡತಿ ಬಹಳ ದಿನಗಳಿಂದ ತವರು ಮನೆ ಸೇರಿದ್ದಳು.
ಇನ್ನು ರವಿಕುಮಾರ್ ಮೂಲತ: ನೆಲಮಂಗಲ ತಾಲೂಕಿನ ಹೊಸನಿಜಗಲ್ ಗ್ರಾಮದವನು. ಪತ್ನಿ ರಾಧ ತುಮಕೂರು ತಾಲೂಕಿನ ಚಿಕ್ಕಕೊರಟಗೆರೆ ಗ್ರಾಮದವಳು. ಕಳೆದ 17 ವರ್ಷದ ಹಿಂದೆ ದಂಪತಿ ಮದುವೆಯಾಗಿದ್ದರು. ದಾಬಸ್ ಪೇಟೆ ಬಳಿ ರಾಧ ಬರುತ್ತಿದ್ದಾಗ ಪತಿ ರವಿಕುಮಾರ್ ಮೃಗದ ರೀತಿಯಲ್ಲಿ ವರ್ತಿಸಿ ಹಲ್ಲೆ ಮಾಡಿ ನಂತರ ಕಿಡ್ನಪ್ ಗೆ ಯತ್ನಿಸಿದ್ದ. ಅಲ್ಲಿಯೇ ಇದ್ದ ಸ್ಥಳೀಯರು ಈತನ ವರ್ತನೆಯನ್ನು ಕಂಡು ಹಿಡುದು ಹಿಗ್ಗಾಮುಗ್ಗಾ ಥಳಿಸಿ ಪತಿ ರವಿಕುಮಾರ್ ಡಾಬಸ್ ಪೇಟೆ ಪೋಲಿಸರ ವಶಕ್ಕೆ ಒಪ್ಪಿಸಿದ್ದಾರೆ. ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.