ಕೊಪ್ಪಳ, ಅ. 16: ತಾಲೂಕಿನ ಯಲಮಗೇರಿ ಗ್ರಾಮದಲ್ಲಿ ಹಳೆ ಮನೆಯ ಚಾವಣಿ ಕುಸಿತದಲ್ಲಿ ಮೂವರು ಮಕ್ಕಳನ್ನು ಕಳೆದುಕೊಂಡ ತಂದೆಯ ಆಕ್ರಂದನ. ಮರಣೋತ್ತರ ಪರೀಕ್ಷೆ ಸಲುವಾಗಿ ಜಿಲ್ಲಾಸ್ಪತ್ರೆಗೆ ಮಕ್ಕಳ ಶವಗಳ ಮುಂದೆ ತಂದೆಯ ರೋದನ.
ತಂದೆಯ ಆಕ್ರಂದನ
‘ನನ್ನ ಜೀವವಾಗಿದ್ದ ಮೂವರು ಮಕ್ಕಳು ಕಣ್ಮುಚ್ಚಿ ಹೋದ ಮ್ಯಾಲ ನಾ ಯಾರಿಗಂತ ಬದುಕಲಿ? ನನಗ ಇನ್ಮುಂದ ಅಪ್ಪ ಅಂತ ಯಾರು ಕರೀತಾರ?
11 ವರ್ಷಗಳ ಹಿಂದೆಯೇ ಪತ್ನಿಯನ್ನು ಕಳೆದುಕೊಂಡಿದ್ದ ಸೋಮಣ್ಣ ಅವರು, ತನ್ನ ಮೂವರು ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ್ದರು. ಈ ಮಕ್ಕಳಿಗೆ ತಂದೆ, ತಾಯಿ ಎರಡೂ ಆಗಿದ್ದರು. ಮೂವರು ಮಕ್ಕಳು ಬೆಳೆದು ದೊಡ್ಡವರಾದರೆ, ವಯಸ್ಸಾದ ತನಗೆ ನೆರವಾಗುತ್ತಾರೆ ಎಂಬ ಕನಸನ್ನೇ ಕಾಣುತ್ತಿದ್ದ ಅವರ ಪಾಲಿಗೆ ಹಳೆಯ ಮನೆ ಚಾವಣಿ ಯಮಸ್ವರೂಪಿಯಾಯಿತು.