‘ಚಾಯ್ ವಾಲಾ’ನ ಅದೃಷ್ಟ

‘ಚಾಯ್ ವಾಲಾ’ನ ಅದೃಷ್ಟ

ಬೆಂಗಳೂರು, ನ. 22 : ಭಲೇ ಅದೃಷ್ಟವೋ ಅದೃಷ್ಟ. ಕಾಲ ಕೂಡಿ ಬಂದರೆ ಅದೃಷ್ಟ ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಶಿವಾಜಿನಗರ ವಿಧಾನಸಭೆ ಉಪಚುನಾವಣೆಯಲ್ಲಿ ಕಣಕ್ಕಿಳಿದಿರುವ 46 ವರ್ಷದ ಸೈಯ್ಯದ್ ಬುಖಾರಿ ಈ ಚಾಯ್-ವಾಲಾನೇ ಸಾಕ್ಷಿ..!
ಪ್ರಧಾನಿ ನರೇಂದ್ರ ಮೋದಿಯವರಂತೆ ಟೀ ಮಾರಾಟಗಾರ, ಶಿವಾಜಿನಗರ ವಿಧಾನಸಭೆ ಉಪಚುನಾವಣೆಯಲ್ಲಿ ಕಣಕ್ಕಿಳಿದಿರುವ ಇವರದ್ದು ಇದು 8ನೇ ಚುನಾವಣೆ, ಈ ಹಿಂದೆ 7 ಬಾರಿ ಸ್ಪರ್ದಿಸಿದ್ದಾರೆ.

ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿರುವ ಬುಖಾರಿ ವಂಶಸ್ಥರು ಟೀ ಮಾರಾಟಗಾರ. ಗೆಲ್ಲುವುದು ಸೋಲುವುದು ಪ್ರಮುಖವಲ್ಲ, ಬೆಳಗ್ಗೆ 6 ಗಂಟೆಗೆ ಎದ್ದು 9ರವರೆಗೆ ಪ್ರಚಾರ ಮಾಡುತ್ತೇನೆ, ಬೆಳಗ್ಗೆ 9 ರಿಂದ ಸಂಜೆ 6ಗಂಟೆವರೆಗೆ ನಾನು ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತೇನೆ, ನಾನು ಪ್ರಚಾರದ ಕಡೆ ಗಮನ ಹರಿಸಬಹುದು, ನನ್ನ ಸ್ನೇಹಿತರು ಹಾಗೂ ಸಂಬಂಧಿಕರು ನನ್ನ ಬೆಂಬಲಕ್ಕಿದ್ದಾರೆ ಎಂದು ಬುಖಾರಿ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos