ಯಲಹಂಕ, ಸೆ. 3: ನಗರದಲ್ಲಿ ಇಂದು ಪ್ರಣಯ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸಂಸ್ಥೆಯನ್ನು ಅಮರ ಖೋಡ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ಸಂಸ್ಥೆಯ ವತಿಯಿಂದ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಹೇಳಿದರು.
ಈರನಗೌಡ ಪಾಟೀಲ್ ಮಾತನಾಡಿ, ಸಂಘ-ಸಂಸ್ಥೆಗಳು ಇರುವುದು ಕಾಟಾಚಾರಕ್ಕಲ್ಲ ಸಮಾಜ ಸುಧಾರಣೆಗೆ ಸಂಸ್ಥೆಯ ಹೆಸರಿನ ಮೇಲೆ ಪದಾಧಿಕಾರಿಗಳು ಅನ್ಯರಿಗೆ ಕೆಡುಕು ಬಯಸದೆ ಏಕತಾ ಭಾವನೆಯಿಂದ ನಡೆದು ಸಮಾಜ ಸುಧಾರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಪ್ರೀತಿ ಪೂಜಾರಿ, ಗುರು ಬಸು ಕಾಂಬಳೆ, ಪ್ರಶಾಂತ್, ರಜಪೂತ್, ಭೀಮಸೇನ ಇನ್ನು ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು.