ಆಸ್ಸಾಂ, ನ. 7 : ಪಕ್ಷಿಗಳು ಮಾನ್ಸೂನ್ ತಿಂಗಳುಗಳಲ್ಲಿ ಹಲವಾರು ವಲಸಿಗರು ಮತ್ತು ಸ್ಥಳೀಯ ಪಕ್ಷಿಗಳು ಗ್ರಾಮದಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತವೆ. ಹೀಗೆ ಯಾಕೆ ಸಾಯುತ್ತವೆ ಎಂಬುವುದು ಇಂದಿಗೂ ನಿಗೂಢವಾಗಿಯೇ ಇದೆ. ಮಾನವರೆ ಅಲ್ಲದೇ ಪಕ್ಷಿಗಳು ಕೂಡ ಆತ್ಮ ಹತ್ಯೆ ಮಾಡಿಕೊಳ್ಳುತ್ತದೆ ಎಂದರೆ ನಂಬುತ್ತೀರಾ? ಹೌದು ಭಾರತ ದೇಶದ ಅಸ್ಸಾಂ ರಾಜ್ಯದಲ್ಲಿ ಪಕ್ಷಿಗಳು ಆತ್ಮ ಹತ್ಯೆ ಮಾಡಿಕೊಳ್ಳುತ್ತಿವೆ.
ಜತೀಂಗಾ ಈಶಾನ್ಯ ಭಾರತದ ರಾಜ್ಯವಾದ ಅಸ್ಸಾಂನಲ್ಲಿರುವ ಒಂದು ಸಣ್ಣ ಹಳ್ಳಿ. ಈ ಹಳ್ಳಿಯು ಪ್ರಶಾಂತವಾದ ಪರ್ವತಗಳಿಂದ ಸುತ್ತುವರೆದಿದೆ.
ಆದರೆ ಇದಕ್ಕಾಗಿ ಇದು ಪ್ರಸಿದ್ಧವಾಗಿಲ್ಲ. ವಾಸ್ತವವಾಗಿ, ಜತಿಂಗಾ ಸಂಪೂರ್ಣವಾಗಿ ಭಿನ್ನವಾದ ಕಾರಣಕ್ಕಾಗಿ ಹೆಸರುವಾಸಿಯಾಗಿದೆ ಅದೇ ಬರ್ಡ್ ಮಿಸ್ಟರಿ. ವಿಜ್ಞಾನಕ್ಕೆ ಸವಾಲ್ ಎಸೆದಿರುವ ಇನ್ನೂ ನಿಗೂಢವಾಗಿದೆ.