ತುಮಕೂರು:ವಿಶ್ವಕರ್ಮ ಸಮುದಾಯದ ಏಳಿಗೆಗೆ ಶ್ರಮಿಸಿದ್ದ ತುರುವೇಕೆರೆ ತಾಲ್ಲೂಕು ಮಾಯಸಂದ್ರ ಹೋಬಳಿಯ ಒಣಕೆರೆ ಗ್ರಾಮದ ೯೩ ವರ್ಷದ ಹಿರಿಯ ಜೀವ ಮಾವಿನಕೆರೆ ವಂಶಸ್ಥ ಹಾಗೂ ಶ್ರೀ ಕೋಡಿರಂಗನಾಥ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಟ್ರಸ್ಟ್ನ ಗೌರವಾಧ್ಯಕ್ಷ ಸಿ. ಕಾಳಹಸ್ತಾಚಾರ್ ಬುಧವಾರ ನಿಧನರಾಗಿದ್ದು, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ತುರುವೇಕೆರೆ ತಾಲ್ಲೂಕು ಮುದಿಗೆರೆ ಸಮೀಪದ ಶ್ರೀ ಕೋಡಿರಂಗನಾಥ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಟ್ರಸ್ಟ್ನ ಅಧ್ಯಕ್ಷ ಕಳಸಾಚಾರ್ ಹಾಗೂ ಕಾರ್ಯದರ್ಶಿ ಆರ್. ರಾಮಸ್ವಾಮಿ ಸಂತಾಪ ಸೂಚಿಸಿದ್ದಾರೆ.
ದಿ|| ಸಿ.ಕಾಳಹಸ್ತಾಚಾರ್ ಅವರು ಸಹಕಾರ ಇಲಾಖೆಯಲ್ಲಿ ಜಂಟಿ ನಿಬಂಧಕರಾಗಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಂತರ ಶ್ರೀ ಕೋಡಿ ರಂಗನಾಥ ಸ್ವಾಮಿಯ ದೇವಾಲಯದ ಜೀರ್ಣೋದ್ಧಾರಕ್ಕೆ ಶ್ರಮಿಸಿದ್ದರು. ಪುರಾತನ ಕಾಲದ ಈ ದೇವಾಲಯದ ಅಭಿವೃದ್ಧಿಗೆ ಹಾಗೂ ವಿಶ್ವಕರ್ಮ ಸಮುದಾಯದ ಉನ್ನತಿಗೆ ತಮ್ಮ ನಿವೃತ್ತಿ ಜೀವನವನ್ನು ಮುಡುಪಾಗಿಟ್ಟಿದ್ದರು.
ಮೃತರ ಅಂತ್ಯಕ್ರಿಯೆಯನ್ನು ಗುರುವಾರ ಮಧ್ಯಾಹ್ನ ಸ್ವಗ್ರಾಮ ಒಣಕೆರೆಯಲ್ಲಿ ನೆರವೇರಿಸಲಾಗಿದೆ. ದಿವಂಗತರು ನಮ್ಮನ್ನು ಅಗಲಿರುವುದು ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಮ್ಮ ಸಂತಾಪದಲ್ಲಿ ವ್ಯಕ್ತಿಪಡಿಸಿದ್ದಾರೆ.