ಸತ್ತ ವ್ಯಕ್ತಿ ಎದ್ದು ಬಂದ…!

ಸತ್ತ ವ್ಯಕ್ತಿ ಎದ್ದು ಬಂದ…!

ಚಿತ್ರದುರ್ಗ, ಅ. 29 : ಇದೊಂದು ವಿಚಿತ್ರ ಘಟನೆ. ಸತ್ತ ವ್ಯಕ್ತಿ ಬದುಕಿದ್ದಾನೆ ಎಂಬ ಸಂಗತಿ ತಿಳಿದು ಮೊದಲು ಗಾಬರಿಯಾದರೂ, ಮೃತಪಟ್ಟ ವ್ಯಕ್ತಿಯನ್ನು ಮಣ್ಣು ಮಾಡಿ ಐವತ್ತು ವರ್ಷದ ನಂತರ ಪ್ರತ್ಯಕ್ಷ ಅಚ್ಚರಿಯ ಘಟನೆಯೊಂದು ಚಿತ್ರದುರ್ಗ ಜಿಲ್ಲೆಯ ಚಿತ್ರನಾಯಕನಹಳ್ಳಿಯಲ್ಲಿ ನಡೆದಿದೆ.
50 ವರ್ಷಗಳ ಹಿಂದೆ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದ ವ್ಯಕ್ತಿ ಈರಣ್ಣ (72) ತಿಂಗಳ ಹಿಂದೆ ಗ್ರಾದವರ ಕೈಗೆ ಸಿಕ್ಕಿದ್ದಾರೆ.
ಸಣ್ಣ ಈರಣ್ಣ ಎಂಬ ವ್ಯಕ್ತಿ 50 ವರ್ಷಗಳ ಹಿಂದೆ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದರಂತೆ, ಬಳಿಕ ಮೃತದೇಹವನ್ನು ಮಣ್ಣು ಮಾಡಿದ್ದ ಕುಟುಂಬ, ಮೂರು ದಿನಗಳ ನಂತರ ತಿಥಿ ಕಾರ್ಯಕ್ಕಾಗಿ ಸಮಾಧಿ ಸ್ಥಳಕ್ಕೆ ಹೋದಾಗ ಸಮಾಧಿ ಕೆದರಿದ ಸ್ಥಿತಿಯಲ್ಲಿತ್ತು ಎಂದಿದ್ದಾರೆ. ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದೆ ಶಾಸ್ತ್ರ ಮುಗಿಸಿ ಮನೆಗೆ ಮರಳಿದ್ದರು.
50 ವರ್ಷಗಳ ಬಳಿಕ ಸಿಕ್ಕಿರುವ ಸಣ್ಣ ಈರಣ್ಣ ತನ್ನಪತ್ನಿಗೆ ಎತ್ತು ಇರಿದು ಹೊಲಿಗೆ ಹಾಕಿಸಿರುವುದನ್ನು ಪತ್ತೆ ಹಚ್ಚಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos