ರಾಯಚೂರು, ಸೆ. 30: ಸಿಎಂ ಮಾಜಿ ಸಿದ್ದರಾಮಯ್ಯ ಅವರು, ಇಂದು ನೆರೆ ಪರಿಹಾರ ವೀಕ್ಷಣೆಗೆ ರಾಯಚೂರು ತೆರಳಿದ್ದ ವೇಳೆ ಸುದ್ದಿಗಾರರ ಜೊತೆಗೆ ಮಾತನಾಡುತ್ತಾ ಸಿಎಂ ಯಡಿಯೂರಪ್ಪನವರ ಕಾಲೆಳೆದಿದ್ದಾರೆ. ಸಿಎಂ ನವರನ್ನು ಕಂಡರೆ ನನಗೆ ಅಯ್ಯೋ ಅನ್ಸುತ್ತೆ. ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪನವರ ರೆಕ್ಕೆ ಪುಕ್ಕವನ್ನೆಲ್ಲ ಕತ್ತರಿಸಲಾಗುತ್ತಿದೆ. ನೆರೆ ಪರಿಹಾರವನ್ನೂ ಕೇಳುವ ಧೈರ್ಯ ಅವರಿಗಿಲ್ಲ. ಸುಮ್ಮನೆ ಹೀಗೆ ತಂತಿ ಮೇಲೆ ಯಾಕೆ ನಡೆಯುತ್ತೀರಿ. ಹೀಗೆ ತಂತಿ ಮೇಲೆ ನಡೆದು ಕೆಳಗೆ ಬೀಳುವ ಬದಲು ರಾಜೀನಾಮೆ ಕೊಟ್ಟು ನಡೆಯಿರಿ” ಎಂದು ಗೇಲಿ ಮಾಡಿದ್ದಾರೆ.