ರಾಯಚೂರು, ಏ. 11, ನ್ಯೂಸ್ ಎಕ್ಸ್ ಪ್ರೆಸ್: ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಆಂಧ್ರಪ್ರದೇಶದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಿದ್ದಾರೆ.
ಸುಭುದೇಂದ್ರ ಶ್ರೀಗಳು ಮಂತ್ರಾಲಯ ಮಠದ ಪೀಠಾಧ್ಯಕ್ಷರಾದ ನಂತರ ಪ್ರಥಮ ಬಾರಿಗೆ ಮತ ಚಲಾಯಿಸಿದ್ದು, ಮಂತ್ರಾಲಯದ ಮಂಡಲ್ ಪರಿಷತ್ ಆದರ್ಶ ಶಾಲೆಯ ಬೂತ್ ನಂ.67 ರಲ್ಲಿ ಶ್ರೀಗಳು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಮಂತ್ರಾಲಯ ಮಠದ ಪೀಠಾಧ್ಯಕ್ಷರಾದ ನಂತ್ರ ಪ್ರಥಮ ಬಾರಿಗೆ ಮತ ಚಲಾಯಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಸುಭುದೇಂದ್ರ ಶ್ರೀಗಳು, ಸಂತಸ ವ್ಯಕ್ತಪಡಿಸಿದ್ರು. ಸಂವಿಧಾನ ದತ್ತವಾದ ಮತದಾನ ಹಕ್ಕು ಚಲಾಯಿಸಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ತಪ್ಪದೇ ಎಲ್ಲರೂ ಮತ ಚಲಾಯಿಸಿ ಎಂದು ಜನರಿಗೆ ಕಿವಿ ಮಾತು ಕೂಡ ಹೇಳಿದರು.