ಹೆಲಿಕಾಪ್ಟರ್ ತಪಾಸಣೆ ನಡೆಸಿದ ಚುನಾವಣಾಧಿಕಾರಿಗಳು

ಹೆಲಿಕಾಪ್ಟರ್ ತಪಾಸಣೆ ನಡೆಸಿದ ಚುನಾವಣಾಧಿಕಾರಿಗಳು

ಶಿವಮೊಗ್ಗ, ಏ. 17, ನ್ಯೂಸ್ ಎಕ್ಸ್ ಪ್ರೆಸ್: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ಪರವಾಗಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಬಳಸಿದ ಹೆಲಿಕಾಪ್ಟರನ್ನು ಚುನಾವಣಾ ಅಧಿಕಾರಿಗಳು ಸಮಗ್ರ ತಪಾಸಣೆಗೆ ಒಳಪಡಿಸಿದ್ದಾರೆ. ಸೊರಬದಲ್ಲಿ ಬಹಿರಂಗ ಪ್ರಚಾರಕ್ಕೆ ಕುಮಾರಸ್ವಾಮಿ ಹೆಲಿಕಾಪ್ಟರ್ನಲ್ಲಿ ಆಗಮಿಸಿದ್ದರು.

ಸೊರಬದ ಅನವಟ್ಟಿ ಹೆಲಿಪ್ಯಾಡ್‍ನಲ್ಲಿ ಕುಮಾರಸ್ವಾಮಿಯವರು ಇಳಿದು ಹೆಲಿಕಾಪ್ಟರ್ನಿಂದ ಹೊರಬರುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಚುನಾವಣಾಧಿಕಾರಿಗಳು ಹೆಲಿಕಾಪ್ಟರ್ನಲ್ಲಿದ್ದ ಬ್ಯಾಗ್ಗಳು, ಸೀಟ್ಗಳು ಹಾಗೂ ಇತರ ವಸ್ತುಗಳನ್ನು ಸಮಗ್ರ ತಪಾಸಣೆಗೆ ಒಳಪಡಿಸಿದರು.

ಸುಮಾರು 20 ನಿಮಿಷ ಕಾಲ ಈ ಶೋಧ ಕಾರ್ಯ ನಡೆಯಿತು. ನಂತರ ಹೆಲಿಕಾಪ್ಟರ್ನ್ನು ಕುಮಾರ ಸ್ವಾಮಿಯವರ ಪ್ರಯಾಣಕ್ಕೆ ಬಿಟ್ಟುಕೊಡ ಲಾಯಿತು.

 

ಫ್ರೆಶ್ ನ್ಯೂಸ್

Latest Posts

Featured Videos